Advertisement
ಹುಟ್ಟಿದ್ದು ಬಡ ಕುಟುಂಬ. ಹೆಚ್ಚು ಓದದ ತಂದೆ, ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡಿರುವ ತಾಯಿ. ಹಿಪ್ಪುನೇರಳೆ, ಭತ್ತದ ಬೇಸಾಯವೇ ಬದುಕಿಗೆ ಆಧಾರ. ತಮಗಿದ್ದ ಸ್ಥಿತಿಯಲ್ಲಿ ಇಬ್ಬರು ಮಕ್ಕಳನ್ನು ಓದಿಸುವುದು ಹೆತ್ತವರಿಗೆ ಕಷ್ಟವಾಗಿತ್ತು. ಅದಕ್ಕಾಗಿ ಪ್ರತಾಪ್ನನ್ನು ಮಳವಳ್ಳಿಯಲ್ಲಿದ್ದ ಸಂಬಂಧಿಕರ ಮನೆಯಲ್ಲಿಟ್ಟು ಓದಿಸಲು ನಿರ್ಧರಿಸಿದರು. ಅಲ್ಲಿ ಪಶು ವೈದ್ಯರಾಗಿದ್ದ ಮಹದೇವಯ್ಯ-ನಾಗಮ್ಮನ ಆಶ್ರಯದಲ್ಲಿ ಆರಂಭದಲ್ಲಿ ಓದಿಗೆ ಉತ್ತಮ ನೆಲೆ ದೊರಕಿತು.
Related Articles
Advertisement
ದೇಶದ ಪ್ರಮುಖ ವಿದ್ಯಾಸಂಸ್ಥೆಗಳಾದ ನವದೆಹಲಿ, ಮುಂಬಯಿ, ಚೆನ್ನೈ, ಹೈದರಾಬಾದ್ ಮತ್ತು ರೂರ್ಕಿಯಲ್ಲಿರುವ ಐಐಟಿಗಳು ನಡೆಸಿದ ವಿಜ್ಞಾನ ಹಾಗೂ ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿರುವ ಪ್ರತಾಪ್, ಅಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಡಿಆರ್ಡಿಒ ಯೋಜನೆಯಡಿ ನಡೆಯುತ್ತಿರುವ ಪ್ರಧಾನಿ ಮೋದಿ ಅವರ ಕನಸಿನ ಯೋಜನೆಗಳಾದ ಮೇಕ್ ಇನ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಶಿಷ್ಯವೇತನಕ್ಕೂ ಪಾತ್ರರಾಗಿರುವುದು ಪ್ರತಾಪ್ರ ಹೆಗ್ಗಳಿಕೆ. ರಾಷ್ಟ್ರದ ಅನೇಕ ಅತ್ಯುನ್ನತ ವಿದ್ಯಾಸಂಸ್ಥೆಗಳಲ್ಲಿ ಇವರು ತಮ್ಮ ಸಂಶೋಧನಾ ಮಾದರಿಗಳನ್ನು ಪ್ರದರ್ಶಿಸಿ ಅವುಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಇವರ ಸಾಧನೆಗೆ ಅನೇಕ ವಿದ್ಯಾರ್ಥಿ ವೇತನಗಳು, ಪ್ರಶಸ್ತಿಗಳು ದೊರಕಿವೆ.
ತಾಳಿ ಬಿಚ್ಚಿಕೊಟ್ಟ ತಾಯಿ, ಜಮೀನು ಮಾರಿದ ತಂದೆಜಪಾನ್ನಲ್ಲಿ ನಡೆಯಲಿದ್ದ ಅಂತಾರಾಷ್ಟ್ರೀಯ ರೋಬೋಟಿಕ್ ವಸ್ತು ಪ್ರದರ್ಶನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ತೆರಳಬೇಕಿದ್ದ ಪ್ರತಾಪ್ಗೆ ಹಣಕಾಸಿನ ಸಮಸ್ಯೆ ಎದುರಾಯಿತು. ಆಗ ಜೆಎಸ್ಎಸ್ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ವಿಮಾನ ಪ್ರಯಾಣ ವೆಚ್ಚ 96 ಸಾವಿರ ರೂ. ಭರಿಸಿದರು. ಆಗಲೂ 75 ಸಾವಿರ ರೂ. ಹಣಕಾಸಿನ ಕೊರತೆ ಎದುರಾಯಿತು. ಆಗ ಪ್ರತಾಪ್ನ ತಾಯಿ ಡಿ.ಎಂ.ಸವಿತಾ ಮಾಂಗಲ್ಯಸರವನ್ನು 50 ಸಾವಿರ ರೂ.ಗೆ ಒತ್ತೆ ಇಟ್ಟರು. ಇನ್ನೂ 25 ಸಾವಿರ ರೂ. ಹಣಕಾಸಿನ ಕೊರತೆ ಎದುರಾಯಿತು. ಮಗನ ಸಾಧನೆ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದ ತಂದೆ ಮಹಾದೇವಯ್ಯ ಅವರು ತಮ್ಮಲ್ಲಿದ್ದ 20 ಗುಂಟೆ ಜಮೀನು ಮಾರಾಟ ಮಾಡಿ ಮಗನಿಗೆ ಹಣವನ್ನು ಹೊಂದಿಸಿಕೊಟ್ಟರು. ಯಾರೊಬ್ಬರ ನಿರೀಕ್ಷೆಯನ್ನೂ ಪ್ರತಾಪ್ ಹುಸಿಗೊಳಿಸಲಿಲ್ಲ. ರೋಬೋಟಿಕ್ ವಸ್ತು ಪ್ರದರ್ಶನದಲ್ಲಿ ಪ್ರತಾಪ್ ಮಂಡಿಸಿದ ಆಟೋ ಪೈಲೆಟೆಡ್ ಡ್ರೋನ್ಗೆ ಚಿನ್ನದ ಪದಕ, ಒಂದು ಬೆಳ್ಳಿ ಪದಕದೊಂದಿಗೆ 10 ಸಾವಿರ ಆಮೇರಿಕನ್ ಡಾಲರ್ ಬಹುಮಾನವಾಗಿ ದೊರಕಿತು. ಇದರೊಂದಿಗೆ ಭಾರತದ ಯುವ ಪ್ರತಿಭಾವಂತ ವಿಜ್ಞಾನಿಯೊಬ್ಬ ವಿಶ್ವ ವಿಜ್ಞಾನ ಲೋಕಕ್ಕೆ ಸೇರ್ಪಡೆಗೊಂಡಂತಾಯಿತು. ಆಟೋ ಪೈಲೆಟೆಡ್ ಡ್ರೋನ್ ಸಂಶೋಧನೆ, ಪ್ರತಾಪ್ ಜೀವನದ ಸಾಧನೆಗೆ ಹೊಸ ಗರಿ ಮೂಡಿಸಿತು. 2018ರ ಜೂ.11 ರಿಂದ ಜೂ.15 ರವರೆಗೆ ಜರ್ಮನಿ ದೇಶದಲ್ಲಿ ನಡೆದ ವಿಶ್ವದ 120 ದೇಶಗಳ ಪ್ರತಿನಿಧಿಗಳು ಸ್ಪರ್ಧಿಸಿದ್ದ ವಿಶ್ವ ಸಿಇಬಿಐಟಿಯ ಕಂಪ್ಯೂಟರ್ ಎಕ್ಸ್ಪೋದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಪ್ರತಾಪ್ಗೆ ಆಲ್ಬರ್ಟ್ ಐನ್ಸ್ಟೆçನ್ ಇನ್ನೋವೇಷನ್ ಪುರಸ್ಕಾರ ಲಭಿಸಿತು. ಪ್ರತಾಪ್ ಸಂಶೋಧನೆ ಆಟೋ ಪೈಲೆಟೆಡ್ ಡ್ರೋನ್
ವಿಮಾನಗಳಲ್ಲಿ ಬಳಸುವ ತಂತ್ರಜಾnನವನ್ನು ಬಳಸಿಕೊಂಡು ಪ್ರತಾಪ್ ಅವಿಷ್ಕರಿಸಿದ್ದು ಆಟೋ ಪೈಲೆಟೆಡ್ ಡ್ರೋನ್ ಸಾಧನ. ಇದನ್ನು ಕೃಷಿ, ವೈದ್ಯಕೀಯ, ರಕ್ಷಣಾ ಹಾಗೂ ತುರ್ತು ಸಂದರ್ಭದಲ್ಲಿ ಬಳಸಬಹುದು. ಅಷ್ಟು ಮಾತ್ರವಲ್ಲ, ಸಮುದ್ರದಲ್ಲಿ ಮೀನುಗಾರರು ಕಾಣೆಯಾದಾಗ ಜಿಪಿಎಸ್ ನೆರವಿನೊಂದಿಗೆ ಈ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಲು ಸಾಧ್ಯವಿದೆ. ಶಂಕಿತ ಉಗ್ರರ ಪತ್ತೆ, ಅಪಘಾತ ಅಥವಾ ಆಪರಾಧ ಪ್ರಕರಣದ ತನಿಖೆ ಇನ್ನಿತರ ತುರ್ತುಸ್ಥಿತಿ ವಿಶ್ಲೇಷಣೆಗೂ ಬಳಸಬಹುದು. ಭೂಕಂಪ, ಚಂಡಮಾರುತದ ಮಾಹಿತಿಯನ್ನು ಪಡೆಯಲೂ ಅನುಕೂಲ. ಗಡಿಪ್ರದೇಶಗಳಲ್ಲಿನ ಕೆಲವು ಕಾರ್ಯಾಚರಣೆಗೂ ಇದು ಸಹಾಯಕ. ಅಲ್ಲದೆ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಅಪಘಾತ ಸ್ಥಳಗಳಿಗೆ ಔಷಧಗಳನ್ನು ಸರಬರಾಜು ಮಾಡಲು, ರೈತರ ಕೃಷಿ ಭೂಮಿಯ ಸಮೀಕ್ಷೆಗೂ ನೆರವಾಗಿದೆ. 2019ರ ಫೆಬ್ರವರಿಯೊಳಗೆ ಆಟೋ ಪೈಲೆಟೆಡ್ ಡ್ರೋನ್ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆ ಪ್ರತಾಪ್ ವಿಶ್ವಾಸ ಹೊಂದಿದ್ದಾರೆ. ರಿಯಲ್ ಸ್ಟಾರ್ ಪ್ರತಾಪ್
ನನ್ನ ಮಗನ ಸಾಧನೆ ಯುವ ಪೀಳಿಗೆಗೆ ಮಾದರಿ ಎನ್ನುವುದೇ ನಮಗೆ ಹೆಮ್ಮೆ. ಅವನ ಸಾಧನೆಯಿಂದ ನಮಗೂ ಎಲ್ಲೆಡೆ ಗೌರವ ಸಿಗುತ್ತಿದೆ ಎನ್ನುತ್ತಾರೆ ತಂದೆ ಮರಿಮಾದಯ್ಯ, ತಾಯಿ ಡಿ.ಎಂ.ಸವಿತಾ. ಹೊಸ ಸಂಶೋಧನೆಯಲ್ಲಿ ನಿರತ
ಜರ್ಮನಿಯ ವಸ್ತು ಪ್ರದರ್ಶನಕ್ಕೆ ಭಾಗವಹಿಸುವುದಕ್ಕಾಗಿ ನಾನು ಬಿಎಸ್ಸಿ ಅಂತಿಮ ವರ್ಷದ ಪರೀಕ್ಷೆ ಬರೆಯಲಾಗಲಿಲ್ಲ. ಪ್ರಸ್ತುತ ನನಗೆ ಫ್ರಾನ್ಸ್ ದೇಶ ಹೊಸ ಪ್ರಾಜೆಕ್ಟ್ವೊಂದನ್ನು ನೀಡಿದೆ. ಅದರ ಹೊರ ದೇಶಗಳಲ್ಲಿರುವ ತಂತ್ರಜಾnನವನ್ನು ಕಲಿತಯ ಬೇಕೆಂಬ ಆಸೆ ನನ್ನದು. ಹಾಗಾಗಿ ಸದ್ಯದಲ್ಲೇ ಫ್ರಾನ್ಸ್ ದೇಶಕ್ಕೆ ಹೋಗುತ್ತಿದ್ದೇªನೆ. ಅಲ್ಲಿಂದ ಬಂದ ನಂತರ ಪದವಿ ಮುಗಿಸುತ್ತೇನೆ ಎನ್ನುತ್ತಾರೆ ನೆಟ್ಕಲ್ ಪ್ರತಾಪ್.
– ಮಂಡ್ಯ ಮಂಜುನಾಥ್