Advertisement

ಅನೈತಿಕ ಸಂಬಂಧಕ್ಕೆ ಅಡ್ಡಿ:ಹೆತ್ತ ಮಗುವನ್ನೇ ಕೊಂದ ರಕ್ಕಸಿ 

09:57 AM Dec 28, 2017 | Team Udayavani |

ಆನೇಕಲ್‌: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದು ಪ್ರಿಯಕರನೊಂದಿಗೆ ಸೇರಿ  ಮಹಿಳೆಯೊಬ್ಬಳು ತಾನೇ ಹೆತ್ತ 2 ವರ್ಷದ ಮಗುವನ್ನು ಉಸಿರುಗಟ್ಟಿಸಿ  ಬರ್ಬರವಾಗಿ ಹತ್ಯೆಗೈದ ಘಟನೆ ಅವಡದೇನಹಳ್ಳಿಯಲ್ಲಿ ನಡೆದಿದೆ.

Advertisement

ನಿವೇದಿತಾ ಎಂಬ ಮಹಿಳೆ ಪ್ರಿಯಕರ ಸತೀಶ್‌ ನೊಂದಿಗೆ ಸೇರಿ  2ವರ್ಷದ ಅನ್ನಪೂರ್ಣಳನ್ನು ಹತ್ಯೆಗೈದಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ನಿವೇದಿತಾಗೆ 5 ವರ್ಷದ ಹಿಂದೆ ಮಾವನಾಗಿದ್ದ ಚಂದ್ರಶೇಖರ್‌ ಎನ್ನುವವರೊಂದಿಗೆ ವಿವಾಹವಾಗಿತ್ತು. ನಿವೇದಿತಾ ತನ್ನ ಅತ್ತೆಯ ಮಗ ಸತೀಶ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ನಾಲ್ಕು ದಿನಗಳ ಹಿಂದೆ ಮಗುವನ್ನು ಮನೆಯಲ್ಲೇ ಬಿಟ್ಟು ಸತೀಶ್‌ ನೊಂದಿಗೆ ಪರಾರಿಯಾಗಿದ್ದಳು . 

 ಆರೋಗ್ಯ ಹದಗೆಟ್ಟ ಕಾರಣ ಪತಿ ಚಂದ್ರಶೇಖರ್‌  ಅನ್ನಪೂರ್ಣಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವಿಚಾರ ತಿಳಿದ ನಿವೇದಿತಾ ಪ್ರಿಯಕರನೊಂದಿಗೆ ಆಸ್ಪತ್ರೆಗೆ ಬಂದು ಮುಗವನ್ನು ಅಪಹರಿಸಿ ಉಸಿರುಗಟ್ಟಿಸಿ ಕೊಲಗೈದಿದ್ದಾಳೆ. 

ಅಪಹರಿಸುತ್ತಿರುವ ದೃಶ್ಯ  ಆಸ್ಪತ್ರೆಯಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. 

Advertisement

ಆನೇಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದು ಪರಾರಿಯಾಗಿದ್ದ ನಿವೇದಿತಾ ಮತ್ತು ಸತೀಶ್‌ನನ್ನು ವಶಕ್ಕೆ ಪಡೆದಿದ್ದು, ಮುಗವಿನ ಶವ ಪೊದೆಯೊಂದರಲ್ಲಿ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next