Advertisement

ತಾಯಿ, ಮಗು ಸಾವು; ಮೂವರಿಗೆ ಗಂಭೀರ ಗಾಯ

11:22 AM Jan 21, 2018 | |

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪ  ಶನಿವಾರ ಸಂಜೆ ಲಾರಿ ಮತ್ತು ಕಾರು ಮುಖಾಮುಖೀ ಢಿಕ್ಕಿಯಾಗಿ ಕಾರಿನಲ್ಲಿದ್ದ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದಾರೆ. ಮಂಗಳೂರು ಬಜಾಲ್‌ ನಿವಾಸಿಗಳಾದ ಅರ್ಚನಾ (34) ಮತ್ತು 6 ತಿಂಗಳ ಮಗು ಆಶಿ ಮೃತಪಟ್ಟವರು. ಕಾರು ಚಲಾಯಿಸುತ್ತಿದ್ದ ಅರ್ಚನಾ ಅವರ ಪತಿ  ಜಗದೀಶ್‌ (38), ಪುತ್ರ ಈಶ್‌ (5) ಮತ್ತು ಜಗದೀಶ್‌ ಅವರ ಅಕ್ಕನ ಮಗಳು ವೈಷ್ಣವಿ (14) ಅವರ ತಲೆಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಅರ್ಚನಾ ಅವರು ಕುದ್ರೋಳಿಯ ಅಳಕೆಯಲ್ಲಿ ಅಲ್ಟ್ರಾ ಡಿಸೈನ್‌ ಸಂಸ್ಥೆಯನ್ನು ನಡೆಸುತ್ತಿದ್ದು ಮ್ಯಾಗಝಿನ್‌ಗಳಿಗೆ ಪುಟ ವಿನ್ಯಾಸ ಮಾಡಿಕೊಡುವ ಕೆಲಸ ನಿರ್ವಹಿಸುತ್ತಿದ್ದರು. ಅರ್ಚನಾ ಅವರು ತನ್ನ ಸಹೋದ್ಯೋಗಿಯ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪತಿ, ಮಕ್ಕಳೊಂದಿಗೆ ಶನಿವಾರ ಕಾರಿನಲ್ಲಿ ಮಡಂತ್ಯಾರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಮರಳುತ್ತಿದ್ದಾಗ ಮಡಂತ್ಯಾರಿನ ಕೊಲ್ಪೆದಬೈಲ್‌ ಸಮೀಪ ಅಪಘಾತ ಸಂಭವಿಸಿತು. ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next