Advertisement

ರಾಯಚೂರು: ಕಿರುಕುಳ ತಾಳದೆ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

11:14 AM Feb 23, 2021 | Team Udayavani |

ರಾಯಚೂರು: ಪತಿ, ಅತ್ತೆ, ಮಾವನ ಕಿರುಕುಳ ತಾಳದೆ ತಾಯಿ-ಮಗು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾನ್ವಿ ತಾಲೂಕಿನ ಆರೋಲಿಯಲ್ಲಿ ನಡೆದಿದೆ.

Advertisement

ಹನುಮಂತಿ ಹುಲಿಗೇಯ್ಯ (26), ಮಗು ಉದಯ (14 ತಿಂಗಳು) ಮೃತಪಟ್ಟಿದ್ದಾರೆ. ಮಟಮಾರಿ ಮೂಲದ ಹನುಮಂತಿಯನ್ನು ಆರೋಲಿಯ ಹುಲಿಗೇಯ್ಯನೊಂದಿಗೆ 7 ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ಈಚೆಗೆ ಗಂಡನ ಮನೆಯವರಿಂದ ಕಿರುಕುಳ ಹೆಚ್ಚಾಗಿತ್ತು ಎನ್ನಲಾಗುತ್ತಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಪೋಟ ಪ್ರಕರಣ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಶುಕ್ರವಾರದಿಂದ ತಾಯಿ ಮಗು ಕಾಣೆಯಾಗಿದ್ದರು. ನಿನ್ನೆ ಮಾನವಿ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಾಗಿತ್ತು. ತನಿಖೆ ವೇಳೆ ಗ್ರಾಮದ ಭಾವಿಯಲ್ಲಿ ಇಬ್ಬರ ಶವ ಪತ್ತೆಯಾಗಿವೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಅತ್ತೆ ಮಾವನನ್ನು ವಶಕ್ಕೆ ಪಡೆದಿದ್ದಾರೆ.

Advertisement

ಇದನ್ನೂ ಓದಿ:ಫೆ. 23 : ತಮಿಳುನಾಡು ಸರ್ಕಾರದಿಂದ ಮಧ್ಯಂತರ ಬಜೇಟ್ ಘೋಷಣೆ

Advertisement

Udayavani is now on Telegram. Click here to join our channel and stay updated with the latest news.

Next