Advertisement

ಬೆಂಕಿ ದುರಂತ: ರೈತ ಸಜೀವ ದಹನ: 20 ಎಕ್ರೆಗೂ ಹೆಚ್ಚು ಕಬ್ಬು ಬೆಳೆ ಬೆಂಕಿಗಾಹುತಿ

11:38 PM Feb 12, 2023 | Team Udayavani |

ಮಂಡ್ಯ: ಕಬ್ಬಿಗೆ ಆಕಸ್ಮಿಕವಾಗಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುತ್ತಿದ್ದ ರೈತ ಮಹಾಲಿಂಗಯ್ಯ (60) ಅವರು ಸಜೀವವಾಗಿ ದಹನವಾಗಿರುವ ಘಟನೆ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ರವಿವಾರ ಸಂಭವಿಸಿದೆ.

Advertisement

ಮಧ್ಯಾಹ್ನ 1 ಗಂಟೆ ಸುಮಾರಿಗೆ ತಾನು ಬೆಳೆದಿದ್ದ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಸ್ಪರ್ಶವಾಗಿದ್ದು, ಅದನ್ನು ನಂದಿಸುತ್ತಿದ್ದಾಗ ಬೆಂಕಿ ಅಕ್ಕಪಕ್ಕದ ಗದ್ದೆಗಳಿಗೂ ವ್ಯಾಪಿಸಿದೆ. ದಟ್ಟ ಹೊಗೆ ನೋಡಿ ಜಮೀನಿನ ಬಳಿ ಗ್ರಾಮಸ್ಥರು ದೌಡಾಯಿಸಿದ್ದಾರೆ. ಅಷ್ಟರೊಳಗೆ ಮಹಾಲಿಂಗಯ್ಯ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದರು. ಗ್ರಾಮಸ್ಥರು ಮಣ್ಣು, ಕಲ್ಲು, ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಪಟ್ಟರೂ ಸಫ‌ಲವಾಗಲಿಲ್ಲ.

ಸಂಸದೆಯಿಂದ ಪರಿಹಾರದ ಭರವಸೆ
ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವ ಸಂಬಂಧ ಖುದ್ದಾಗಿ ಮುಖ್ಯಮಂತ್ರಿ ಜತೆಗೆ ಅತಿ ಶೀಘ್ರದಲ್ಲಿ ಚರ್ಚಿಸಲಾಗುವುದು ಎಂದು ಸಂಸದೆ ಸುಮಲತಾ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next