Advertisement

ಯುವ ಶೂಟರ್‌ಗಳ ಮೇಲೆ ಹೆಚ್ಚಿನ ಒತ್ತಡ: ರಾಣಾ

07:00 AM Aug 12, 2018 | Team Udayavani |

ಹೊಸದಿಲ್ಲಿ: ಮುಂಬರುವ ಏಶ್ಯನ್‌ ಗೇಮ್ಸ್‌ನಲ್ಲಿ ಹದಿ ಹರೆಯದ ಪ್ರತಿಭಾನ್ವಿತ ಶೂಟರ್‌ಗಳಾದ ಮನು ಭಾಕರ್‌ ಮತ್ತು ಅನೀಶ್‌ ಭನ್ವಾಲ ಅವರಿಂದ ಪದಕ ನಿರೀಕ್ಷೆ ಮಾಡುವ ಮೂಲಕ ಅವರ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ ಎಂದು ನಾಲ್ಕು ಬಾರಿ ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ಜಸ್ಪಾಲ್‌ ರಾಣ ಅಭಿಪ್ರಾಯಪಟ್ಟಿದ್ದಾರೆ.

Advertisement

16ರ ಹರೆಯದ ಬಾಕರ್‌ ಮತ್ತು 15ರ ಹರೆಯದ ಭನ್ವಾಲ ಅವರು ಕಳೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಅನುಕ್ರಮವಾಗಿ 10 ಮೀ. ಏರ್‌ ಪಿಸ್ತೂಲ್‌ ಮತ್ತು 25 ಮೀ. ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಮುಂದಿನ ಏಶ್ಯನ್‌ ಗೇಮ್ಸ್‌ನಲ್ಲೂ ಅವರಿಬ್ಬರಿಂದ ಪದಕ ನಿರೀಕ್ಷಿಸಲಾಗಿದೆ.

ಭನ್ವಾಲ ಸದ್ಯ ಸೀನಿಯರ್‌ ತಂಡದ ಸದಸ್ಯರ ಜತೆ ಅಭ್ಯಾಸ ನಡೆಸುತ್ತಿದ್ದರೆ ಬಾಕರ್‌ ಭಾರತದ ಜೂನಿಯರ್‌ ರಾಷ್ಟ್ರೀಯ ಕೋಚ್‌ ರಾಣಾ ಜತೆ ಭೋಪಾಲ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅವರಿಬ್ಬರಿಂದ ಪ್ರತಿಯೊಬ್ಬರು ಪದಕ ನಿರೀಕ್ಷೆ ಮಾಡುತ್ತಿದ್ದಾರೆ. ಸೀನಿಯರ್‌ ಶೂಟರ್‌ಗಳ ಮೇಲೆ ಇರಬೇಕಾಗಿದ್ದ ಗಮನವೆಲ್ಲ ಈಗ ಇವರಿಬ್ಬರ ಮೇಲೆ ಬಿದ್ದಿದೆ. ಅವರಿಬ್ಬರು ಎಲ್ಲರಂತೆ 15-16 ವರ್ಷ ಪ್ರಾಯದ ಶೂಟರ್‌ಗಳು. ಅವರಿಂದ ಈ ರೀತಿಯ ನಿರೀಕ್ಷೆ ಮಾಡಿದರೆ ಅವರು ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ರಾಣಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next