Advertisement

ತೋಟಗಾರಿಗೆ ಬೆಳೆಯಿಂದ ಹೆಚ್ಚು ಆದಾಯ

01:02 PM Jan 04, 2020 | Suhan S |

ಯಾದಗಿರಿ: ಕೃಷಿ ಬೆಳೆಗಳಿಗೆ ಹೊಲಿಸಿದರೆ ಯಾವುದೇ ತೋಟಗಾರಿಕೆ ಬೆಳೆಯು ರೈತರಿಗೆ ಹೆಚ್ಚಿನ ಆದಾಯ ನೀಡುತ್ತದೆ ಎಂದು ಬಾಗಲಕೋಟೆ ತೋಟಗಾರಿಕೆ ವಿವಿ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಡಾ| ರೇವಣಪ್ಪ ಹೇಳಿದರು.

Advertisement

ನಗರದಲ್ಲಿ ಕಲಿಕೆ ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ತಾಂತ್ರಿಕ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರೈತರ ಶೇಂಗಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಜಮೀನಿಗೆ, ತಮ್ಮ ಆರ್ಥಿಕತೆಗೆ ತಕ್ಕಂತೆ ಸೂಕ್ತ ಬೆಳೆ ಆರಿಸಿಕೊಂಡು ಬೆಳೆಯಲು ರೈತರಿಗೆ ಪ್ರೇರೆಪಿಸಿದರು. ಕೃಷಿ ಬೆಳೆಗಳಿಗಿಂತ ಕನಿಷ್ಟ 10 ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ತೋಟಗಾರಿಕೆ ಬೆಳೆಗಳಿರುವುದಾಗಿ, ಬಿತ್ತನೆ, ಪ್ರತಿ ಬೆಳೆಗೆ ತನ್ನದೆ ಆದ ನಾಟಿ ವಿಧಾನ, ಪ್ರತಿ ಬೆಳೆಗೆ ತನ್ನದೆ ಆದ ಅಂತರ, ಬೆಳೆಗೆ ತಕ್ಕಂತೆ ಸೂಕ್ತವಾದ ಬೇಸಾಯ ಕ್ರಮ ಇರುವುದಾಗಿ ತಿಳಿಸಿದರು.

ತೋಟಗಾರಿಕೆ ಬೆಳೆಗಳು ಎಕರೆವಾರು ಹೆಚ್ಚಿನ ಇಳುವರಿ ಮತ್ತು ಲಾಭ ತಂದು ಕೊಡುವುದಾಗಿ ತಿಳಿಸಿದರು. ತೋಟಗಾರಿಕೆ ವಿವಿಯ ಡಾ| ಪ್ರಶಾಂತ ಜೇನು ಸಾಕಾಣಿಕೆ ಬಗ್ಗೆ ಮಾತನಾಡಿದರು. ಕಲಿಕೆ ಕಾರ್ಯಕ್ರಮಾ ಧಿಕಾರಿ ಅರುಣಕುಮಾರ ಶಿವರಾಯ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಉಮೇಶ ಕಟ್ಟಿಮನಿ, ಆನಂದ ಬೆಂಗೇರಿ ಇದ್ದರು. 24 ಗ್ರಾಮಗಳಿಂದ 24 ರೈತರು ಹಾಗೂ ಕಲಿಕೆ ಸಂಸ್ಥೆಯ ಉಮೇಶ, ಮಂಜುನಾಥ ಮತ್ತು ಶಾಂತಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next