Advertisement

ಪೂಜಾಗೆ ತಿವಿದ ಕೋಲೆ ಬಸವ! “ಮೂಕ ಹಕ್ಕಿ’ಚಿತ್ರದಲ್ಲಾದ ವಿಚಿತ್ರ ಘಟನೆ

04:12 PM Nov 16, 2017 | Sharanya Alva |

ಕೆಲ ಸಿನಿಮಾಗಳ ಚಿತ್ರೀಕರಣ ಸಂದರ್ಭದಲ್ಲಿ ಕೆಲವೊಂದು ಘಟನೆಗಳು ನಡೆಯೋದು ಸಹಜ. ಆದರೆ, ಕೆಲವು ಸುದ್ದಿಯಾದರೆ, ಇನ್ನು ಕೆಲವು ಸುದ್ದಿಯಾಗೋದೇ ಇಲ್ಲ. ಚಿತ್ರೀಕರಣ ವೇಳೆ ಎಷ್ಟೇ ಎಚ್ಚರವಹಿಸಿದ್ದರೂ ಒಮ್ಮೊಮ್ಮೆ ಹಾಗೆ ಆಗುವುದುಂಟು. ಅಂಥದ್ದೊಂದು ಘಟನೆ “ಮೂಕ ಹಕ್ಕಿ’ ಚಿತ್ರದಲ್ಲೂ ನಡೆದಿದೆ.

Advertisement

ಅಂದಹಾಗೆ ಆ ಘಟನೆ ಏನ್ಗೊತ್ತಾ? “ಮೂಕ ಹಕ್ಕಿ’ ಒಂದು ಅಲೆಮಾರಿ ಜನಾಂಗದ ಬದುಕಿನ ಚಿತ್ರಣ. ನೋವುಂಡ, ದನಿ ಕಳೆದುಕೊಂಡವರ ಕಥೆ ಮತ್ತು ವ್ಯಥೆ. “ತಿಥಿ’ ಖ್ಯಾತಿಯ ಪೂಜಾ ಆ ಚಿತ್ರದ ಆಕರ್ಷಣೆ. ಅವರೊಂದಿಗೆ ಕೋಲೆ ಬಸವ (ಗೂಳಿ) ಪ್ರಮುಖ ಪಾತ್ರ ನಿರ್ವಹಿಸಿದೆ. ಕೋಲೆ ಬಸವ ಹಿಡಿದು, ಊರೂರು ಅಲೆಯೋ ಅಲೆಮಾರಿಯಾಗಿ ಪೂಜಾಗೆ ಆ ಕೋಲೆ ಬಸವ ಒಮ್ಮೆಲ್ಲೆ ಗುದ್ದಿದ್ದರಿಂದ ಪೂಜಾ ಅವರ ಎಡಗೈ ಪಕ್ಕೆಗೆ ಗಾಯವಾಗಿದೆ. ಪರಿಣಾಮ ಒಂದು ವಾರದ ಕಾಲ ಬೆಂಗಳೂರಿನ ಸಾಗರ್‌ ಆಸ್ಪತ್ರೆಯಲ್ಲಿ ಪೂಜಾ ಅವರು ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವಿಶೇಷವೆಂದರೆ, ಆ ಘಟನೆ ನಡೆದು ಒಂದು ವಾರದ ನಂತರ ಪೂಜಾ, ಪುನಃ ಕೋಲೆ ಬಸವನೊಂದಿಗೆ ಬೆರೆತು ಚಿತ್ರೀಕರಣದಲ್ಲಿ ಪಾಲ್ಗೊಂಡು ಆ ದೃಶ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಅದು ಕ್ಲೈಮ್ಯಾಕ್ಸ್‌ ದೃಶ್ಯ. ಇನ್ನೇನು ಕೋಲೆ ಬಸವನ ಜತೆ ನಾಲ್ಕೈದು ಹೆಜ್ಜೆ ಇಡಬೇಕು ಅನ್ನುವಷ್ಟರೊಳಗೆ ಕೋಲೆ ಬಸವ ಪೂಜಾ ಅವರಿಗೆ ತನ್ನ ಕೊಂಬುಗಳಿಂದ ತಿವಿದು ಬಿಟ್ಟಿದೆ. ಇದರಿಂದ ಪೂಜಾ ನೆಲಕ್ಕೆ ಬಿದ್ದ ಕೂಡಲೇ ಚಿತ್ರತಂಡದವರೆಲ್ಲರೂ ಅವರ ಬಳಿ ಧಾವಿಸಿ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೊಂದು ದೃಶ್ಯ ಮುಗಿದಿದ್ದರೆ, ಚಿತ್ರಕ್ಕೆ ಕುಂಬಳಕಾಯಿ ಬೀಳಬೇಕಿತ್ತು. ಆದರೆ, ಕೆಟ್ಟ ಘಳಿಗೆ ಹಾಗಾಯಿತು. ಒಂದೊಳ್ಳೆಯ ಕೆಲಸ ಮಾಡುವಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ. ಹಾಗೆಯೇ ಒಳ್ಳೆಯ ಚಿತ್ರ ಮೂಡಿಬಂದಾಗ, ಇಂತಹ ಘಟನೆಗಳೆಲ್ಲ ಸಹಜ ಎಂಬುದು ಪೂಜಾ ಮಾತು.

ಅದೇನೆ ಇರಲಿ, ಪೂಜಾ ಅವರಿಗೆ “ಮೂಕ ಹಕ್ಕಿ’ ಚಿತ್ರದ ಬದುಕಿನ ಮತ್ತೂಂದು ಮಜಲು. “ತಿಥಿ’ ನೋಡಿದವರಿಗೆ ಪೂಜಾ ಹೇಗೆ ಕಾಣುತ್ತಿದ್ದರೋ, ಇಲ್ಲೂ ಅದೇ ಪೂಜಾ ಕಾಣುತ್ತಾರೆ. ಅಂಥದ್ದೇ ಕಾಸ್ಟೂéಮ್‌, ಅದೇ ಡಿಗ್ಲಾಮರು, ಮತ್ತದೇ ಲುಕ್ಕು. ಆದರೆ, ಭಾವನೆಗಳು ಮಾತ್ರ ಬೇರೆ. ಪಾತ್ರವೂ ಹೊಸದಾಗಿದೆ. ಮೂಕಹಕ್ಕಿಯಲ್ಲಿರುವ ಗೌರಿ ಎಂಬ ಪಾತ್ರ “ತಿಥಿ’ಯ ಕಾವೇರಿ ಪಾತ್ರವನ್ನು ಮರೆಸುವಷ್ಟರ ಮಟ್ಟಿಗೆ ಮೂಡಿಬಂದಿದೆ ಅನ್ನುತ್ತಾರೆ ಪೂಜಾ.

Advertisement

Udayavani is now on Telegram. Click here to join our channel and stay updated with the latest news.

Next