Advertisement

ಮೂಡುಬಿದಿರೆ: ಸಂತೆಯ ಮರುದಿನ ತ್ಯಾಜ್ಯರಾಶಿ

11:01 PM Jan 01, 2023 | Team Udayavani |

ಮೂಡುಬಿದಿರೆ: ಪೇಟೆಯಲ್ಲಿದ್ದ ಪುರಸಭಾ ದಿನವಹಿ ಮಾರುಕಟ್ಟೆ ಸ್ವರಾಜ್ಯ ಮೈದಾನಕ್ಕೆ ತಾತ್ಕಾಲಿಕವೆಂದು ಸ್ಥಳಾಂತರ ಗೊಂಡು ವರುಷ ಐದು ಸರಿದಿದೆ. ಹಲವು ಸಮಸ್ಯೆಗಳ ನಡುವೆ ಇಂದೋ ನಾಳೆಯೋ ಮತ್ತೆ ಪೇಟೆಗೆ ಸಾಗುವ ನಿರೀಕ್ಷೆಯನ್ನು ಅಲ್ಲಿನ ವ್ಯಾಪಾರಿಗಳು ಹೊಂದಿದ್ದಾರೆ. ಈ ಸಮಸ್ಯೆಗಳ ಪೈಕಿ ತ್ಯಾಜ್ಯ ವಿಲೇವಾರಿ ಎಂಬುದು ಪ್ರಶ್ನಾರ್ಹವಾಗಿಯೇ ಉಳಿದಿದೆ.

Advertisement

ಅದರಲ್ಲೂ ಶುಕ್ರವಾರದ ಸಂತೆಯ ದಿನ ಹೊರ ಜಿಲ್ಲೆಗಳಿಂದಲೂ ವ್ಯಾಪಾರಿಗಳು ಬಂದು ಸ್ಪರ್ಧಾತ್ಮಕವಾಗಿ ವ್ಯಾಪಾರ ಮಾಡುತ್ತ ರಾತ್ರಿ ತಮ್ಮ ತಾತ್ಕಾಲಿಕ ಶಿಬಿರಗಳನ್ನು ಬಿಚ್ಚಿ ಹೊರಡುವಾಗ ಇಡೀ ದಿನ ಹೊರಚೆಲ್ಲಿದ ತ್ಯಾಜ್ಯ ವಸ್ತುಗಳನ್ನು ಹಾಗೆಯೇ ಬಿಟ್ಟು ಹೋಗುತ್ತಾರೆ. ತರಕಾರಿ ತ್ಯಾಜ್ಯವನ್ನು ಜಾನುವಾರುಗಳು ಮೆದ್ದು (ತಿನ್ನಲಾಗದ್ದನ್ನು ಹಾಗೆಯೇ ಬಿಟ್ಟು) ಸೆಗಣಿ ಹಾಕಿ, ಗಂಜಳ ಸುರಿಸಿ ಧನ್ಯವಾದ ಸೂಚಿಸುವಂತೆ ತೋರುತ್ತದೆ. ಆದರೆ, ಪುರಸಭೆಯ ಕಾರ್ಮಿಕರು ಬರುವವರೆಗೆ ಇಡೀ ಮಾರುಕಟ್ಟೆ ಅಂಗಣದಲ್ಲಿ ಪ್ಲಾಸ್ಟಿಕ್‌ ಚೀಲಗಳು ರಾಶಿ ರಾಶಿಯಾಗಿ ಬಿದ್ದು ಕೊಂಡು ಗಾಳಿಗೆ ಹಾರಾಡುತ್ತ ಇರುತ್ತವೆ.

ಪುರಸಭೆಯೇ ಸಂತೆ ವಹಿಸಿಕೊಂಡ ಗುತ್ತಿಗೆದಾರರೇ ಕಸದ ಬುಟ್ಟಿಗಳನ್ನು ಸಂತೆ ನಡೆಯುವ ಸಂದರ್ಭ ಇಟ್ಟರೆ ವ್ಯಾಪಾರಿಗಳು ಹಸಿ ಕಸ, ಒಣ ಕಸ ಮತ್ತು ನಿರುಪಯುಕ್ತ ತ್ಯಾಜ್ಯ ವಸ್ತುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ ವ್ಯವಸ್ಥೆ ಮಾಡಿದರೆ ಇದರಿಂದ ಪೌರಕಾರ್ಮಿಕರ ಕೆಲಸವೂ ಹಗುರವಾಗದೆ. ಸ್ವತ್ಛ ಮೂಡುಬಿದಿರೆ ಕುರಿತಾಗಿ ಜಾಥಾ, ಸ್ಲೋಗನ್‌ಗಳ ಅಬ್ಬರ ಇರಲಿ ಜತೆಗೆ ಸಂತೆ ಪ್ರಾಂಗಣ ಸ್ವತ್ಛವಾಗಿರಲಿ.

Advertisement

Udayavani is now on Telegram. Click here to join our channel and stay updated with the latest news.

Next