Advertisement

ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಹೋದ ವ್ಯಕ್ತಿ ನಾಪತ್ತೆ

04:55 PM Mar 10, 2022 | Team Udayavani |

ಕೊಟ್ಟಿಗೆಹಾರ : ಕಳೆದ ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆಗೆ ತೆರಳಿ ಕೊಟ್ಟಿಗೆಹಾರದವರೆಗೆ ನಡೆದು ಬಂದ ವ್ಯಕ್ತಿ ನಾಪತ್ತೆಯಾಗಿದ್ದಾರೆ.

Advertisement

ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಗಂಗಾದರ (50)ವರ್ಷದವರಾಗಿದ್ದು ಕಳೆದ ಫೆ. 27ರಂದು ತಮ್ಮ ಊರಿನವರ ಜೊತೆ ಪಾದಯಾತ್ರೆ ತೆರಳಿ ಕೊಟ್ಟಿಗೆಹಾರದ ನಿಸರ್ಗ ಹೋಟೇಲು ಬಳಿ ತಮ್ಮ ಊರಿನವರ ಜೊತೆ ತಂಗಿದ್ದರು. ನಂತರ ಮಾರನೇ ದಿನ ಮುಂಜಾನೆ 3 ಗಂಟೆ ಹೊತ್ತಿಗೆ ತಮ್ಮ ಊರಿನವರು ಅಲ್ಲಿಂದ ಪಾದಯಾತ್ರೆಗೆ ಹೊರಡಲು ಸಿದ್ದವಾದರು. ಆದರೆ ಗಂಗಾಧರ ಅವರು ಶೌಚಕ್ಕೆ ಹೋಗಿ ಬರುವುದಾಗಿ ಹೇಳಿದರು. ಆದರೆ ಅರ್ಧ ಗಂಟೆ ಕಳೆದರೂ ಬಾರದೇ ಇದ್ದುದರಿಂದ ರಸ್ತೆಯಲ್ಲಿ ತುಂಬಾ ಪಾದಯಾತ್ರಿಗಳ ಓಡಾಟ ಇದ್ದರಿಂದ ಅವರ ಜೊತೆ ಬರಬಹುದೆಂದು ಶಂಕಿಸಿ ಊರಿನವರು ಪಾದಯಾತ್ರೆ ಬೆಳೆಸಿದರು.

ಆದರೆ ಗಂಗಾದರ್ ಮಾತ್ರ ಧರ್ಮಸ್ಥಳಕ್ಕೂ ಬಾರದೇ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ. ಅವರ ಪತ್ನಿ ಮೊಬೈಲ್‌ಗೆ ಕರೆ ಮಾಡಿದರೂ ಮೊಬೈಲ್ ಸ್ವಿಚ್ಚ್ ಆಫ್ ಆಗಿದ್ದುದ್ದರಿಂದ ಮನೆಗೆ ಬರಬಹುದೆಂದು ಭಾವಿಸಿದ್ದರು. ಆದರೆ ಅವರ ಊರಿನ ಆನಂದ ಎಂಬವವರು ಧರ್ಮಸ್ಥಳ ಪಾದಯಾತ್ರೆ ಮುಗಿಸಿ ಮನೆಗೆ ಬಂದಾಗ ಅವರು ಮನೆಗೆ ಬಂದಿಲ್ಲ ಎಂಬ ವಿಷಯ ತಿಳಿದು ಪತ್ನಿ ಜಯಂತಿ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿರುವ ಪೊಲೀಸರು ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ. ವ್ಯಕ್ತಿ ಕಂಡು ಬಂದರೆ 9480805151 ಸಂಪರ್ಕಿಸಲು ಕೋರಿದೆ.

ಇದನ್ನೂ ಓದಿ : ಸದ್ಯದಲ್ಲೇ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷದ ಸಾಮರ್ಥ್ಯ ಪ್ರದರ್ಶನ: ಪೃಥ್ವಿ ರೆಡ್ಡಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next