Advertisement

Moodbidri: ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಗೆ ಇರಿತ

12:43 AM Aug 14, 2024 | Team Udayavani |

ಮೂಡುಬಿದಿರೆ: ಪ್ರೇಮ ವೈಫ‌ಲ್ಯದ ಆಕ್ರೋಶದಲ್ಲಿ ತುಮಕೂರಿನ ಯುವಕ ಇಲ್ಲಿನ ಕಾಲೇಜೊಂದರ ತರಗತಿಗೆ ನುಗ್ಗಿ ವಿದ್ಯಾರ್ಥಿನಿ ಭೂಮಿಕಾ ಎಂಬಾಕೆಗೆ ಕತ್ತರಿಯಿಂದ ಇರಿದ ಪ್ರಕರಣ ಸೋಮವಾರ ಸಂಭವಿಸಿದೆ.

Advertisement

ಆರೋಪಿ ತುಮಕೂರಿನ ಮಂಜುನಾಥ್‌ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.ಮಂಜುನಾಥ ಮತ್ತು ಭೂಮಿಕಾ ತುಮಕೂರಿನವರು. ಪಿಯುಸಿಯಲ್ಲಿ ಜತೆಯಾಗಿ ಓದಿದವರು. ಇವರ ನಡುವೆ ಪ್ರೇಮವಿತ್ತೆನ್ನಲಾಗಿದೆ.

ವಸತಿಗೃಹದಲ್ಲಿ ತಂಗಿದ್ದ ಮಂಜುನಾಥ್‌ ಸೋಮವಾರ ಕೃತ್ಯ ನಡೆಸಿದ್ದ. ಆಕೆಯ ಕುತ್ತಿಗೆಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ. ಸಹಪಾಠಿ ವಿದ್ಯಾರ್ಥಿಗಳು ಮಂಜುನಾಥನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next