Advertisement

ಕರ್ಫ್ಯೂ ಹಿನ್ನಲೆ : ಮೂಡಬಿದಿರೆ ಕಂಬಳೋತ್ಸವ ಮುಂದೂಡಿಕೆ

10:07 AM Dec 21, 2019 | Team Udayavani |

ಮೂಡಬಿದಿರೆ: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸೆಂಬರ್ 22ರ ಮಧ್ಯರಾತ್ರಿವರೆಗೆ ಕರ್ಫ್ಯೂ ವಿಧಿಸಲಾಗಿರುವುದರಿಂದ ಶನಿವಾರ ನಡೆಯಬೇಕಿದ್ದ ಕಂಬಳ ಕೂಟವನ್ನು ಮುಂದೂಡಲಾಗಿದೆ.

Advertisement

ಮೂಡುಬಿದಿರೆಯ ಕಡಲಕೆರೆ ರಾಣಿ ಅಬ್ಬಕ್ಕ ನಿಸರ್ಗಧಾಮದಲ್ಲಿ ಡಿಸೆಂಬರ್ 21ರಂದು ಕೋಟಿ-ಚೆನ್ನಯ ಜೋಡುಕರೆ ಕಂಬಳ ಆಯೋಜಿಸಲು ತೀರ್ಮಾನವಾಗಿತ್ತು. ಆದರೆ ಮಂಗಳೂರಿನಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುವ ಕಾರಣ ಕಂಬಳ ಕೂಟವನ್ನು ಮುಂದೂಡಲು ನಿರ್ಧರಿಸಲಾಗಿದೆ.

ಶನಿವಾರದ ಬದಲು ಡಿಸೆಂಬರ್ 25 (ಬುಧವಾರ) ನಡೆಸಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next