Advertisement

Moodabidri ಹೊಸಬೆಟ್ಟು: ಈಜುಕೊಳಕ್ಕೆ ಧುಮುಕಿದ ಯುವಕ ಸಾವು

12:12 AM May 20, 2024 | Team Udayavani |

ಮೂಡುಬಿದಿರೆ: ಹೊಸಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಬೊಗ್ರುಗುಡ್ಡೆ ಬಳಿಯ ಹೋಂ ಸ್ಟೇಯ ಈಜುಕೊಳದಲ್ಲಿ ಡೈ ಹೊಡೆದ ಮಂಜೇಶ್ವರದ ಪುನೀತ್‌ ಕೃಷ್ಣ ಮೂಲ್ಯ (29) ತಲೆಗೆ ಬಿದ್ದ ಏಟಿನಿಂದಾಗಿ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ.

Advertisement

ಕೆಲವರು ಸಹೋದರ ಸಂಬಂಧಿಗಳು ಈ ಹೋಂ ಸ್ಟೇಗೆ ಬಂದಿದ್ದರು. ಅದರಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ಇದ್ದರು. ಅವರಲ್ಲಿ ಎರಡನೆಯ ಯುವಕ ಈಜುತ್ತಿರುವ ಸಂದರ್ಭದಲ್ಲಿ ನೀರಿಗೆ ಡೈ ಹೊಡೆದಾಗ ಆಯತಪ್ಪಿ ಯುವಕನ ತಲೆ ನೆಲಕ್ಕೆ ಬಡಿಯಿತೆನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next