Advertisement

ಅರುಣ್‌ ಜೇತ್ಲಿ ಇಂದು ಹಣಕಾಸು ಸಚಿವ ಪದ ಸ್ವೀಕಾರ ಸಂಭವ

04:37 PM Aug 16, 2018 | Team Udayavani |

ಹೊಸದಿಲ್ಲಿ : ಈ ವರ್ಷ ಮೇ ತಿಂಗಳಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅರುಣ್‌ ಜೇತ್ಲಿ ಅವರು ಇಂದು ಗುರುವಾರ ತಮ್ಮ ಹಣಕಾಸು ಸಚಿವಾಲಯದ ಅಧಿಕಾರವನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Advertisement

ಮೇಲ್ಮನೆಯ ನಾಯಕರೂ ಆಗಿರುವ 65ರ ಹರೆಯದ ಬಿಜೆಪಿ ನಾಯಕ ಜೇತ್ಲಿ ಅವರು ಈಚೆಗೆ ರಾಜ್ಯಸಭಾ ಉಪಾಧ್ಯಕ್ಷರನ್ನು ಚುನಾಯಿಸುವ ಮತದಾನದಲ್ಲಿ ಪಾಲ್ಗೊಂಡಿದ್ದರು. 

ರಾಜ್ಯಸಭಾ ಕಲಾಪದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬೀ ಆಜಾದ್‌ ಅವರು ಜೇತ್ಲಿ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next