Advertisement

ಕೇರಳಕ್ಕೆ ಮುಂಗಾರು; ನಿಸರ್ಗ ಜತೆಗೂಡಿ ಭಾರೀ ಮಳೆ

12:54 AM Jun 02, 2020 | Sriram |

ಹೊಸದಿಲ್ಲಿ: ಕೇರಳಕ್ಕೆ ವಾಡಿಕೆಯಂತೆ ಜೂ.1ರಂದು ನೈಋತ್ಯ ಮುಂಗಾರು ಪ್ರವೇಶಿಸಿದೆ. ಸದ್ಯ ದಲ್ಲೇ ಕರ್ನಾಟಕವನ್ನೂ ತಲುಪುವ ಸಾಧ್ಯತೆ ಇದೆ. 2013ರ ಬಳಿಕ ಇದೇ ಮೊದಲ ಬಾರಿಗೆ ನಿಗದಿತ ಸಮಯಕ್ಕೇ ಮಳೆ ಮಾರುತಗಳು ಆಗಮಿಸಿದ್ದು, ಈ ವರ್ಷ ವಾಡಿಕೆಗಿಂತ ಅಧಿಕ ಮಳೆ ಸುರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Advertisement

ಸದ್ಯ ಕೇರಳದ ಹಲವು ಜಿಲ್ಲೆಗಳಲ್ಲಿ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಇದು ಅರಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಮುಂಗಾರು ಮಾರುತಗಳ ಜಂಟಿ ಪರಿಣಾಮ. ಉಡುಪಿ, ದಕ್ಷಿಣ ಕನ್ನಡ ಸಹಿತ ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ಸೋಮ ವಾರ ಸಂಜೆಯಿಂದಲೇ ಧಾರಾಕಾರ ಮಳೆಯಾಗುತ್ತಿದೆ. ಮುಂದಿನ 24 ತಾಸುಗಳ ಅವಧಿಯಲ್ಲಿ ಕೇರಳದ ಒಂಬತ್ತು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಹಾ,ಗುಜರಾತ್‌ಗೆ ನಾಳೆ “ನಿಸರ್ಗ’
ಅರಬಿ ಸಮುದ್ರದ ನೈಋತ್ಯ ಭಾಗ ದಲ್ಲಿ ಸೃಷ್ಟಿ  ಯಾಗಿರುವ ವಾಯುಭಾರ ಕುಸಿತ ಸೋಮವಾರ ಮತ್ತಷ್ಟು ತೀವ್ರತೆ ಪಡೆದಿದೆ.ಇದು ಮಂಗಳವಾರದ ಹೊತ್ತಿಗೆ ಚಂಡಮಾರುತ ವಾಗಲಿದ್ದು, ಜೂ.3ರಂದು ಮಹಾರಾಷ್ಟ್ರ ಮತ್ತು ಗುಜರಾತ್‌ ಕರಾವಳಿಗೆ ಅಪ್ಪಳಿಸಲಿದೆ. ಇದಕ್ಕೆ “ನಿಸರ್ಗ’ ಎಂದು ಹೆಸರಿಡಲಾಗಿದೆ. ಕರ್ನಾಟಕ,ಕೇರಳ,ಗೋವಾಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ ಕರಾವಳಿಯಲ್ಲೂ ಭಾರೀ ಮಳೆ ಜತೆಗೆ ವೇಗದ ಗಾಳಿ ಬೀಸ ಲಿದ್ದು, ಮೀನುಗಾರರು ಸಮುದ್ರಕ್ಕಿಳಿ ಯದಂತೆ ಎಚ್ಚರಿಕೆ ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next