Advertisement

ಜೂ.7ಕ್ಕೆ ಮುಂಗಾರು

01:24 AM Jun 05, 2019 | Team Udayavani |

ಹೊಸದಿಲ್ಲಿ: ಕೇರಳಕ್ಕೆ ಮುಂಗಾರು ಪ್ರವೇಶವು ಇನ್ನೂ ಒಂದು ದಿನ ತಡವಾಗಲಿದ್ದು, ಜೂ.7ರಂದು ನೈಋತ್ಯ ಮಾರುತವು ದೇವರ ನಾಡನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪರಿಷ್ಕೃತ ಮುನ್ಸೂಚನೆಯನ್ನು ನೀಡಿದೆ.

Advertisement

ಬುಧವಾರದಿಂದ ನೈಋತ್ಯ ಮುಂಗಾರು ಚುರುಕಾಗಲಿದ್ದು, ಶುಕ್ರ ವಾರ ಕೇರಳಕ್ಕೆ ಪ್ರವೇಶಿಸಲಿದೆ ಎಂದು ಇಲಾಖೆ ಹೇಳಿದೆ. ಜೂ.4ರಂದು ಮುಂಗಾರು ಪ್ರವೇಶಿಸಲಿದೆ ಎಂದಿದ್ದ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್‌, ಕಳೆದ ವಾರವಷ್ಟೇ ಜೂ.7 ಎಂದು ದಿನಾಂಕ ಬದಲಿಸಿತ್ತು.

ಕರ್ನಾಟಕಕ್ಕೆ ಜೂ. 8ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಮೇಲ್ಮೆ„ ಸುಳಿಗಾಳಿಯಿಂದಾಗಿ ದಕ್ಷಿಣ ಒಳನಾಡಿನಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಇದು ಇನ್ನೂ ಕೆಲವು ದಿನ ಮುಂದುವರಿಯುವ ನಿರೀಕ್ಷೆ ಇದೆ. ಕರಾವಳಿಯಲ್ಲಿ ಜೂ.8ರ ಬಳಿಕ ಮಳೆ ಚುರುಕಾಗುವ ನಿರೀಕ್ಷೆ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next