Advertisement

ಮಕ್ಕಳು ಸೇರಿ 10 ಮಂದಿ ಕಚ್ಚಿದ್ದ ಮಂಗ ಸೆರೆ  

08:17 PM Mar 03, 2021 | Team Udayavani |

ಶಹಾಪುರ: ಖಾನಾಪುರ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಮಂಗವೊಂದು ಮಕ್ಕಳು ಸೇರಿದಂತೆ 10 ಮಂದಿಗೆ ಕಚ್ಚುವ ಮೂಲಕ ಭೀತಿಯನ್ನುಂಟು ಮಾಡಿತ್ತು. ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮದಲ್ಲಿಯೇ ಬೀಡು ಬಿಟ್ಟು ಹುಚ್ಚು ಹಿಡಿದ ಮಂಗ ಹಿಡಿಯಲು ಕಾರ್ಯಾಚರಣೆ ನಡೆಸಿತ್ತು. ಗದಗ ಜ್ಯೂದಿಂದ ಬಂದಿದ್ದ ನುರಿತ ತಂಡ ಮಂಗಳವಾರ ಹುಚ್ಚು ಹಿಡಿದಿದ್ದ ಮಂಗ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Advertisement

ಗಾಯಗೊಂಡವರನ್ನು ಧಾರವಾಡ ಮತ್ತು ಹುಬ್ಬಳ್ಳಿ, ತಾಳಿಕೋಟೆ ಮತ್ತು ರಾಯಚೂರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹುಚ್ಚು ಹಿಡಿದ ಮಂಗ ಹಿಡಿಯಲು ಗದಗ ಮೂಲದ ನುರಿತ ತಂಡ ಹಾಗೂ ಸ್ಥಳೀಯ ಅರಣ್ಯ ಅಧಿಕಾರಿಗಳ ತಂಡ ಹರಸಾಹಸ ಪಟ್ಟಿದ್ದು, ಕೊನೆಗೆ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ವಲಯ ಅರಣ್ಯ ಅ ಧಿಕಾರಿ ಐ.ಬಿ. ಹೂಗಾರ ತಿಳಿಸಿದ್ದಾರೆ. ಬಂ ಧಿಸಿದ ಮಂಗ ಗದಗ ಜ್ಯೂಗೆ ಕಳುಹಿಸಿ ಕೊಡಲಾಗಿದ್ದು, ಗ್ರಾಮಸ್ಥರು ಹೆದರಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next