Advertisement

ಚಾರ್ಮಾಡಿ: ವಾನರಗಳ ಹಸಿವು ನೀಗಿಸಿದ ಶಾಸಕರು

09:09 PM Apr 18, 2020 | Sriram |

ಬೆಳ್ತಂಗಡಿ: ಲಾಕ್‌ಡೌನ್‌ ಹಿನ್ನೆಲೆ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಆಹಾರಕ್ಕಾಗಿ ಪ್ರಯಾಣಿಕರನ್ನು ಅವಲಂಬಿಸಿದ ವಾನರಗಳು ಕೊರಗುತ್ತಿರುವುನ್ನು ಮನಗಂಡು ಶಾಸಕ ಹರೀಶ್‌ ಪೂಂಜ ಶನಿವಾರ ಆಹಾರ ಪೂರೈಸಿದರು.

Advertisement

ಶನಿವಾರ ಶಾಸಕರು ಎರಡು ಟ್ರೇ ಕಿತ್ತಳೆ, 2 ಟ್ರೇ ಕಲ್ಲಂಗಡಿ ಸಹಿತ ವಿವಿಧ ಹಣ್ಣುಗಳನ್ನು ಒದಗಿಸಿದರು. ಲಾಕ್‌ಡೌನ್‌ ಮುಗಿಯುವವರೆಗೆ ಅವುಗಳಿಗೆ ನಿತ್ಯ ಬೆಳಗ್ಗೆ ಆಹಾರ ಪೂರೈಸಲು ಸ್ಥಳೀಯ ಯುವಕರಿನ್ನು ನಿಯೋಜಿಸಲಾಗುವುದು ಎಂದು ಶಾಸಕ ಹರೀಶ್‌ ಪೂಂಜಾ ತಿಳಿ ಸಿದರು. ಶಾಸಕರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next