Advertisement

ಕೋತಿ, ಬೀದಿನಾಯಿಗಳ ಕಾಟಕ್ಕೆ ಬ್ರೇಕ್ ಹಾಕಿ ‌

03:32 PM Jul 22, 2023 | Team Udayavani |

ಎಚ್‌.ಡಿ.ಕೋಟೆ: ಪಟ್ಟಣದ ಹಾದಿ ಬೀದಿಗಳಲ್ಲಿ ಎಲ್ಲಿ ನೋಡಿದರೂ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುವ ಬೀದಿ ನಾಯಿಗಳು, ಇದು ಸಾಲದು ಎಂಬಂತೆ ಕೋತಿಗಳ ಕಾಟದಿಂದ ಎಚ್‌.ಡಿ. ಕೋಟೆ ಜನತೆ ತತ್ತರಿಸಿ ಹೊಗಿದ್ದಾರೆ. ಈ ಸಮಸ್ಯೆ ದಿನೇ ದಿನೆ ಜಟಿಲವಾಗುತ್ತಿದ್ದರೂ ಇವುಗಳನ್ನು ಸೆರೆ ಹಿಡಿಸಿ ಜನರಲ್ಲಿ ನೆಮ್ಮದಿ ವಾತಾವರಣ ಕಲ್ಪಿಸಬೇಕಾದ ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಮಾತ್ರ ಸಮಸ್ಯೆಗೂ ನಮಗೂ ಸಂಬಂಧವೇ ಇಲ್ಲದಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಇತ್ತೀಚೆಗೆ ಪಟ್ಟಣದ ಎಲ್ಲಾ 23 ವಾರ್ಡುಗಳಲ್ಲಿಯೂ ಬೀದಿ ನಾಯಿ ಮತ್ತು ಕೋತಿಗಳು ಹಾವಳಿ ಹೆಚ್ಚಾಗಿದ್ದು, ಶಾಲೆಗೆ ತೆರಳುವ ಮಕ್ಕಳಿಂದ ಹಿಡಿದು ವಯೋವೃದ್ಧರನ್ನು ಸಹ ಬಿಡದ ಬೀದಿ ನಾಯಿಗಳು ದಾಳಿ ಮಾಡಿ ಇದುವರೆಗೂ ಅನೇಕರನ್ನು ಕಚ್ಚಿ ಆಸ್ಪತ್ರೆ ಸೇರುವಂತೆ ಮಾಡಿವೆ. ಇದು ಸಾಲದು ಎಂಬಂತೆ ನಿತ್ಯ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುವುದು ಹಾಗೂ ಅಡ್ಡ ಬರುವುದು ಮಾಡುವುದರಿಂದ ಅನೇಕ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಮನೆ ನುಗ್ಗುವ ಕೋತಿಗಳು: ಮನೆ ಹೊಕ್ಕುವ ಕೋತಿಗಳ ಕಾಟಕ್ಕೆ ಬೆಚ್ಚಿದ ನಿವಾಸಿಗಳು, ಮರದಲ್ಲಿ ರುವ ಎಳನೀರನ್ನು ಬಿಡ್ತಿಲ್ಲ, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕೋತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಬೀದಿ ನಾಯಿಗಳ ಉಪಟಳವನ್ನು ಮೀರಿಸುವಂತೆ ತಾಲೂಕು ಆಡಳಿತ ಸೌಧ ಸೇರಿದಂತೆ ಪಟ್ಟಣದ ಹಲವಾರು ಪ್ರದೇಶಗಳಲ್ಲಿ ತನ್ನ ಮರಿಗಳ ಸಹಿತ ಬೀಡು ಬಿಟ್ಟಿರುವ ಕೋಟಿಗಳ ಹಿಂಡು, ಪಟ್ಟಣದ ಮನೆ ಮನೆಗಳಲ್ಲಿ ಗೃಹಿಣಿ ಯರನ್ನು ಇನ್ನಿಲ್ಲದಂತೆ ಕಾಡುತ್ತಿವೆ.

ಒಂಟಿಯಾಗಿ ಮನೆಯಲ್ಲಿರಲು ಹೆದರು ಜನ: ಕೋತಿಗಳ ಹಾವಳಿ ಎಷ್ಟರ ಮಟ್ಟಿಗೆ ಮಿತಿಮಿರಿದೆ ಎಂದರೆ ಮನೆಗಳ ಹೆಂಚುಗಳನ್ನು ತೆಗೆದು ಕೆಳಗೆ ಬಿಸಾಡಿ ಹೊಡೆದು ಹಾಕಿ ಮನೆ ಒಳಹೊಕ್ಕು ಕೆಲ ಉಪಕರಣಗಳನ್ನು ಕಿತ್ತು ನಾಶ ಮಾಡುವುದಲ್ಲದೆ, ಆಡುಗೆ ಮನೆಯಲ್ಲಿ ಸಿಕ್ಕ ಸಿಕ್ಕ ಆಹಾರ ಸಾಮಗ್ರಿ, ತರಕಾರಿ, ದಿನಸಿ ಪದಾರ್ಥಗಳನ್ನು ತಿಂದು ಚೆಲ್ಲಾಡಿ ನಾಶಪಡಿಸುವುದರ ಜೊತೆಗೆ ಮನೆಯಲ್ಲಿರುವ ಹಣ್ಣು ಹಂಪಲು ಮತ್ತು ತಿಂಡಿ ತಿನಿಸುಗಳನ್ನು ಹೊತ್ತೂಯ್ಯುತ್ತಿವೆ. ಮನೆ ಹಿಂದೆ ಮುಂದೆ ಇರುವ ತೆಂಗಿನ ಮರದ ಎಳನೀರನ್ನು ಕಿತ್ತು ಕುಡಿದು ಬಿಸಾಡುತ್ತಿದ್ದು, ಕೋತಿಗಳ ಮೀತಿ ಮೀರಿದ ಹಾವಳಿಯಿಂದಾಗಿ ಇಲ್ಲಿನ ನಿವಾಸಿಗಳು ಮನೆಯಲ್ಲಿ ಒಂಟಿಯಾಗಿ ಇರಲು ಹೆದರುವ ವಾತಾವರಣ ಸೃಷ್ಟಿಯಾಗಿದೆ. ಈಗಲಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಬೀದಿನಾಯಿ ಮತ್ತು ಕೋತಿಗಳ ಮಿತಿಮಿರಿದ ಹಾವಳಿಯಿಂದ ಏನಾದರೂ ಅವಘಡ ಸಂಭವಿಸುವ ಮೊದಲೇ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಶಾಶ್ವತ ಪರಿಹಾರ ಹುಡುಬೇಕು.

ಶೀಘ್ರ ಕೋತಿ ಹಿಡಿಯುವ ತಂಡವನ್ನು ಕರೆಸಿಕೊಂಡು ಕೋತಿಗಳನ್ನು ಸೆರೆಹಿಡಿಸುತ್ತೇವೆ. ಆದರೆ ಸುಪ್ರೀಂ ಕೋರ್ಟ್‌ ಆದೇಶ ಪ್ರಕಾರ ಬೀದಿನಾಯಿಗಳನ್ನು ಸೆರೆ ಹಿಡಿದು ಬೇರೆ ಕಡೆ ಬಿಡುವಂತಿಲ್ಲ, ಕೊಲ್ಲುವಂತು ಇಲ್ಲ, ಅವುಗಳ ನಿಯಂತ್ರಣಕ್ಕೆ ಸಂತಾನಹರಣ (ಎಬಿಸಿ) ಚಿಕಿತ್ಸೆ ಒಳಪಡಿಸಲು ಅವಕಾಶವಿದೆ. ಆದರೆ ಇದಕ್ಕೆ ಹೆಚ್ಚಿನ ಅನುದಾನ ಬೇಕಿರುವುದರಿಂದ ಶೀಘ್ರದಲ್ಲೇ ಆಡಳಿತ ಮಂಡಳಿ ಒಪ್ಪಿಗೆ ಪಡೆದು ಬೀದಿ ನಾಯಿ ಮತ್ತು ಕೋತಿಗಳ ಹಾವಳಿ ನಿಯಂತ್ರಣಕ್ಕೆ ಶ್ರಮಿಸುತ್ತೇನೆ. ●ಸುರೇಶ್‌.ಪಿ, ಮುಖ್ಯಾಧಿಕಾರಿ, ಪುರಸಭೆ

Advertisement

ಎಚ್‌.ಡಿ.ಕೋಟೆಟ ಬಡಾವಣೆಯಲ್ಲಿ ಕೋತಿ ಮತ್ತು ಬೀದಿನಾಯಿಗಳ ಕಾಟ ಹೇಳತೀರದಾಗಿದೆ. ಕೋತಿಗಳಂತು ಮನೆ ನುಗ್ಗಿ ಅಡುಗೆ ಮನೆಗೆ ಹೋಗಿ ಸಿಕ್ಕ ಸಿಕ್ಕ ಪದಾರ್ಥಗಳನ್ನೆಲ್ಲ ತಿಂದು, ಚೆಲ್ಲಾಡಿ ಹೊತ್ತೋಯ್ಯುತ್ತಿವೆ. ನಮಗೆ ಸೇರಿದ 5 ತೆಂಗಿನ ಮರಗಳಲ್ಲಿ ಎಳನೀರನ್ನು ಕಿತ್ತು ಕೋತಿಗಳು ನಾಶಪಡಿಸುತ್ತಿದ್ದು ನಾನೇ ಅಂಗಡಿಯಲ್ಲಿ ತೆಂಗಿನಕಾಯಿ ಕೊಂಡುಕೊಳ್ಳುತ್ತಿದ್ದೇನೆ. ನಮ್ಮ ಬಡಾವಣೆ ಜನರೇ ಹಣ ನೀಡುತ್ತೇವೆ. ಮೊದಲು ಕೋತಿ, ಬೀದಿನಾಯಿಗಳಿಂದ ನಮಗೆ ಮುಕ್ತಿ ನೀಡಿ. ●ನಾಗಲಕ್ಷ್ಮೀ, ಗೃಹಣಿ, 7ನೇ ವಾರ್ಡ್‌

-ಬಿ.ನಿಂಗಣ್ಣಕೋಟ

Advertisement

Udayavani is now on Telegram. Click here to join our channel and stay updated with the latest news.

Next