Advertisement

Fraud Case ಹಣ ವರ್ಗಾಯಿಸಿಕೊಂಡು ವಂಚನೆ: ತನಿಖೆ ಆರಂಭ

01:30 AM Feb 01, 2024 | Team Udayavani |

ಕುಂಬಳೆ: ಸಾಮಗ್ರಿಗಳನ್ನು ವಿತರಣೆ ಮಾಡಿದ 32 ಲಕ್ಷ ರೂ. ಹಣವ‌ನ್ನು ಸೇಲ್ಸ್‌ ಎಕ್ಸಿಕ್ಯೂಟಿವ್‌ ತನ್ನ ಸ್ವಂತ ಖಾತೆಗೆ ವರ್ಗಾಯಿಸಿ ವಂಚಿಸಿರುವುದಾಗಿ ನ್ಯಾಯಾಲಯಕ್ಕೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Advertisement

ಕುಂಬಳೆ ಶಾಂತಿಪಳ್ಳ ಬದ್ರಿಯ ನಗರದ ಗಬ್ಟಾನ ಮ್ಯಾಟ್ರಿಸ್‌ ಸಂಸ್ಥೆಯ ಮಾಲಕ ಪ್ರದೀಪ್‌ ಕುಮಾರ್‌ ಶರ್ಮ ನೀಡಿದ ದೂರಿನಂತೆ ಸಂಸ್ಥೆಯ ಸೇಲ್ಸ್‌ ಎಕ್ಸಿಕ್ಯೂಟಿವ್‌ ಯುಪಿ ನಿವಾಸಿಯಾದ ಅನಿಲ್‌ ಕುಮಾರ್‌ ಸಿಂಗ್‌ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಹಾಸಿಗೆಗಳಿಗೆ ಆರ್ಡರ್‌ ಪಡೆದು ವಿತರಿಸುವ ಹಾಗು ಹಣ ಸಂಗ್ರಹಿಸುವ ಕೆಲಸವನ್ನು ಅನಿಲ್‌ ಕುಮಾರ್‌ ಸಿಂಗ್‌ ಮಾಡುತ್ತಿದ್ದರು. ಆದರೆ ಸಂಗ್ರಹಿಸಿದ ಹಣವನ್ನು ತನ್ನ ಸ್ವಂತ ಖಾತೆಗೆ ವರ್ಗಾಯಿಸಿದ್ದಾಗಿ ಪ್ರದೀಪ್‌ ಕುಮಾರ್‌ ಶರ್ಮ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಾಗಿ ತನಿಖೆ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next