Advertisement

ಮಂಡ್ಯದಲ್ಲಿ ಹಣ ಹಂಚಿಕೆ,ಗೂಂಡಾಗಿರಿ: ಯಡಿಯೂರಪ್ಪ

11:29 AM Apr 19, 2019 | Sriram |

ಶಿವಮೊಗ್ಗ: “ಎಲ್ಲಾ ಕಡೇ ಉತ್ತಮವಾಗಿ ಮತದಾನ ನಡೆದಿದೆ. 14 ಕ್ಷೇತ್ರದಲ್ಲಿ ಮತದಾನ ನಡೆದಿದ್ದು, 11ರಲ್ಲಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯದಲ್ಲಿ ನ್ಯಾಯಯುತ ಚುನಾವಣೆ ನಡೆದಿಲ್ಲ. ದುಡ್ಡು ಹಂಚಿ, ಗೂಂಡಾಗಿರಿ ಮಾಡಿದ್ದಾರೆ. ಈ ಬಗ್ಗೆ ಗೊತ್ತಾಗಲಿದೆ ಎಂದರು. ಶಾಸಕ ಕೆ.ಎಸ್‌. ಈಶ್ವರಪ್ಪ ಪ್ರತಿಕ್ರಿಯಿಸಿ, “ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆದಿದೆ. ಅತೀ ಹೆಚ್ಚು ಮತದಾನ ನಡೆದಿರುವುದು ಸಂತೋಷ. ಹೆಚ್ಚಿನ ಮತದಾನವಾಗಿರುವುದು ಬಿಜೆಪಿಗೆ ವರದಾನವಾಗಲಿದೆ. 14 ಕ್ಷೇತ್ರದಲ್ಲಿ 10ರಿಂದ 12 ಸೀಟು ಬಿಜೆಪಿ ಗೆಲ್ಲಲಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next