Advertisement

ಸೋಮವಾರದ ನಿಮ್ಮ ಗ್ರಹಬಲ ಹೇಗಿದೆ?

07:35 AM Dec 07, 2020 | keerthan |

ಮೇಷ: ಸಾಂಸಾರಿಕವಾಗಿ ಸಾಮರಸ್ಯ ನಿಮಗೆ ಸುಖ, ಸಂತೋಷ, ನೆಮ್ಮದಿಯನ್ನು ತಂದು ಕೊಡಲಿದೆ. ವೃತ್ತಿರಂಗದಲ್ಲಿ ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆಗೆ ಹೋಗದಿರಿ. ಒಳ್ಳೆಯ ಫ‌ಲಗಳು ಗೋಚರಿಸಲಿವೆ.

Advertisement

ವೃಷಭ: ಒಳಿತು ಕೆಡುಕು ಇವೆರಡನ್ನೂ ಸಮಚಿತ್ತದಿಂದ ಸ್ವೀಕರಿಸುವುದು ಒಳಿತು. ಎಲ್ಲಾ ರೀತಿಯಲ್ಲಿ ಒಮ್ಮೆಲೇ ಮುನ್ನುಗ್ಗುವುದು ಬೇಡ. ಜೀವನವನ್ನು ಸದ್ಯದ ಸ್ಥಿತಿಯಲ್ಲಿ ಇದ್ದ ಹಾಗೇ ಎದುರಿಸಬೇಕಾದೀತು. ಕಿರು ಸಂಚಾರವಿದೆ.

ಮಿಥುನ: ಹೆಚ್ಚಿನ ಕೆಲಸ ಕಾರ್ಯಗಳು ಅನಿರೀಕ್ಷಿತ ರೀತಿಯಲ್ಲಿ ಯಶಸ್ಸು ತಂದು ಕೊಡಲಿವೆ. ಆತ್ಮವಿಶ್ವಾಸ ಹಾಗೂ ಪ್ರಯತ್ನಬಲ ನಿಮಗೆ ಪೂರಕವಾಗಿ ನಿಲ್ಲಲಿದೆ. ಹೊಸ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕಾಗುವುದು.

ಕರ್ಕ: ಪ್ರತಿಭಾ ಹಾಗೂ ಪ್ರಭಾವಶಾಲಿಗಳಾದ ನಿಮಗೆ ಅದೃಷ್ಟವು ಆಟ ಆಡಿಸಲಿದೆ. ಆದರೂ ಹೆದರದೆ ಧೈರ್ಯದಿಂದ ಎದುರಿಸಿದ್ದಲ್ಲಿ ನಿಮಗೆ ಯಶಸ್ಸಿನ ಅನುಭವವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿರುತ್ತದೆ.

ಸಿಂಹ: ವೈಯಕ್ತಿಕ ಸಮಸ್ಯೆಗಳನ್ನು ದಿಟ್ಟ ನಿರ್ಧಾರಗಳಿಂದ ಎದುರಿಸಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳು ಆಸಕ್ತಿಯಿಂದ ನೆರವೇರಲಿದೆ. ವಾಹನ ಖರೀದಿ ಹಾಗೂ ಅದರ ವಿಲೇವಾರಿಯಲ್ಲಿ ಲಾಭವನ್ನು ತಂದು ಕೊಡಲಿದೆ.

Advertisement

ಕನ್ಯಾ: ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರೀಕ್ಷಿತ ಫ‌ಲವು ಸಂತಸ ತರಲಿದೆ. ಉತ್ತಮ ಹಿತೈಷಿಗಳು ಮಿತ್ರ ವರ್ಗದವರ ಸಹಕಾರದಿಂದ ಕಾರ್ಯಸಾಧನೆಗೆ ಅನುಕೂಲವಾಗಲಿದೆ.

ತುಲಾ: ಪ್ರಯತ್ನ ಮಾಡುವ ಮುನ್ನವೇ ಫ‌ಲದ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟುಬಿಡಿರಿ. ಹಲವು ಕಾರಣಗಳಿಂದ ನಿಮ್ಮ ಆರೋಗ್ಯಕ್ಕೆ ಭಂಗ ಬರಲಿದೆ. ಶ್ರಮ ಪಟ್ಟರೂ ಕೆಲಸ ಕಾರ್ಯಗಳು ಮಂದಗತಿಯಲ್ಲಿ ನಡೆದಾವು.

ವೃಶ್ಚಿಕ: ಹಣಕಾಸಿನ ಹಾಗೂ ಆರೋಗ್ಯದ ವಿಚಾರದಲ್ಲಿ ನಿಗಾ ವಹಿಸುವುದು ಅಗತ್ಯವಿದೆ. ನಿಮ್ಮ ತಾಳ್ಮೆ ಸವಾಲಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಒಂದಲ್ಲ ಒಂದು ಸಮಸ್ಯೆಯಿಂದ ಹೈರಾಣಾಗುವಿರಿ. ಯೋಗ್ಯ ಸಂಬಂಧಗಳು ಬರಲಿವೆ.

ಧನು: ನಿಮಗೆ ಈಗ ಸಮಯವು ಪ್ರಸನ್ನವಾಗಿದ್ದುದರಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಬದುಕು ಉಲ್ಲಾಸದಿಂದ ಕೂಡಿರುತ್ತದೆ. ಆದರೂ ಅನಗತ್ಯ ದುಂದುವೆಚ್ಚ ಬೇಡ. ಹಿರಿಯರ ಸಲಹೆಗೆ ಕಿವಿಗೊಡಿರಿ.

ಮಕರ: ನೀವು ವೈಯಕ್ತಿಕವಾಗಿ ಮಾಡಿದ ತಪ್ಪುಗಳ ಸುಳಿಯಲ್ಲಿ ಸಿಲುಕದಂತೆ ಜಾಗ್ರತೆ ಮಾಡಿರಿ. ವಿವಾಹಿತರಿಗೆ ಅನಾವಶ್ಯಕ ತಪ್ಪು ಅಭಿಪ್ರಾಯ ಮೂಡಿಬಂದು ಕಲಹಕ್ಕೆ ಕಾರಣವಾಗಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಮಾಡಿರಿ.

ಕುಂಭ: ವೃತ್ತಿರಂಗದಲ್ಲಿ ಕೂಡ ಏರುಪೇರು ಕಂಡು ಬಂದು ಬೇಸರವಾಗಿಲಿದೆ. ಬಾಳ ಸಂಗಾತಿಗಳು ಪರಸ್ಪರ ಅರಿತು ಬಾಳಲಿದ್ದಾರೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸಕ್ಕಾಗಿ ವಿದೇಶ ಪ್ರಯಾಣವು ಕೂಡಿ ಬರಲಿದೆ. ಸಹನೆ ಬೇಕು.

ಮೀನ: ನಿಮ್ಮ ನಿರಾಶಾ ಮನೋಭಾವವನ್ನು ದೂರ ಮಾಡಿದರೆ ಉತ್ತಮ. ಆರ್ಥಿಕವಾಗಿ ಚೇತರಿಕೆ ಕಂಡು ಬಂದರೂ ಕನ್ನಡಿಯೊಳಗಿನ ಗಂಟಾಗಲಿದೆ. ನಿಧಾನವಾಗಿ ದೊರಕಲಿದೆ. ನಿಮ್ಮ ಪ್ರಯತ್ನ ಬಲದಿಂದ ಕಾರ್ಯ ಸಾಧನೆಯಾಗಲಿದೆ.

ಎನ್.ಎಸ್. ಭಟ್

Advertisement

Udayavani is now on Telegram. Click here to join our channel and stay updated with the latest news.

Next