Advertisement

ಲಾರಿ – ಕಾರು ಅಪಘಾತ: ಲಾರಿ ಚಾಲಕನ ಮೇಲೆ ಮೊಳಕಾಲ್ಮೂರು ತಹಶಿಲ್ದಾರ್ ಹಲ್ಲೆ

02:02 PM Sep 06, 2020 | keerthan |

ಚಿತ್ರದುರ್ಗ: ಲಾರಿ ಮತ್ತು ಕಾರಿನ ನಡುವೆ ಢಿಕ್ಕಿಯಾಗಿದ್ದು,‌ ಕಾರು‌ ಚಾಲನೆ ಮಾಡುತ್ತಿದ್ದ ಮೊಳಕಾಲ್ಮೂರು ತಹಶಿಲ್ದಾರ್ ಮಲ್ಲಿಕಾರ್ಜುನ್ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.

Advertisement

ಶನಿವಾರ ರಾತ್ರಿ‌ ಚಿತ್ರದುರ್ಗ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಖಾಸಗಿ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ಬರುತ್ತಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನ್ ಲಾರಿಗೆ ಢಿಕ್ಕಿಯಾದ ಬಳಿಕ ಲಾರಿ ಚಾಲಕನ ಮುಖಕ್ಕೆ ಕಲ್ಲಿನಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಎಡನೀರು ಸ್ವಾಮೀಜಿ ಕೃಷ್ಣೈಕ್ಯ: ಏನಿದು ದೇಶದ ಗಮನ ಸೆಳೆದಿದ್ದ ಕೇಶವಾನಂದ ಭಾರತಿ ಪ್ರಕರಣ

ಸ್ಥಳದಲ್ಲಿದ್ದವರು ಲಾರಿ ಚಾಲಕನ ಸಹಾಯಕ್ಕೆ ಬಂದಿದ್ದು, ತಹಶೀಲ್ದಾರ್ ಮಲ್ಲಿಕಾರ್ಜುನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಹಲ್ಲೆ ಮಾಡುವ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next