Advertisement

ಮೊಳಕಾಲ್ಮೂರು: ಹೊರ ರಾಜ್ಯದಿಂದ ಬಂದ 6 ಜನರಿಗೆ ಸಾಂಸ್ಥಿಕ ಕ್ವಾರಂಟೈನ್‌

12:58 PM May 18, 2020 | Naveen |

ಮೊಳಕಾಲ್ಮೂರು: ತಾಲೂಕಿಗೆ ಹೊರ ರಾಜ್ಯಗಳಿಂದ ಆಗಮಿಸಿದ್ದ 6 ಜನ ಸ್ಥಳೀಯರನ್ನು ತಾಲೂಕು ಆಡಳಿತ ಪಟ್ಟಣದ ಆರ್‌.ಎಂ.ಎಸ್‌.ಎ ಬಾಲಕಿಯರ ವಸತಿನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಟ್ಟಿದೆ.

Advertisement

ಚಳ್ಳಕೆರೆ ತಾಲೂಕು ಕೋಡಿಹಳ್ಳಿಯಲ್ಲಿ ಪತ್ತೆಯಾಗಿರುವ ಸೋಂಕಿತ ವ್ಯಕ್ತಿ, ತಾಲೂಕಿನ ವಿವಿಧ ಗ್ರಾಮಗಳಿಗೆ ಬಂದಿರುವ ಭೀತಿಯ ಬೆನ್ನಲ್ಲೇ ಹೊರ ರಾಜ್ಯಗಳಿಂದ ಬಂದ 6 ಜನ ಸ್ಥಳೀಯರನ್ನು ತಾಲೂಕು ಆಡಳಿತ ಪತ್ತೆ ಹಚ್ಚಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಟ್ಟಿದೆ. ಆಂಧ್ರಪ್ರದೇಶದ ಧರ್ಮವರಂನಿಂದ ಮಹಿಳೆ, ಪೆರಗುಪಾಳ್ಯದಿಂದ ಒಬ್ಬ ಪುರುಷ, ಹೈದರಾಬಾದ್‌ ನಿಂದ ಒಬ್ಬ ಪುರುಷ, ದೆಹಲಿಯಿಂದ ಇಬ್ಬರು ಪುರುಷರು ಹಾಗೂ ಚೆನ್ನೈನಿಂದ ಒಬ್ಬ ಪುರುಷ ಸೇರಿದಂತೆ ಒಟ್ಟು 6 ಜನರು ಮೇ 16 ರಂದು ಆಗಮಿಸಿದ್ದರು. ಈ ಮಾಹಿತಿ ಆಧರಿಸಿ ತಹಶೀಲ್ದಾರ್‌ ಎಂ. ಬಸವರಾಜ್‌ ಹಾಗೂ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ಅವರೆಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಟ್ಟಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ| ಪದ್ಮಾವತಿ, ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ, ಕ್ಷೇತ್ರ ಶಿಕ್ಷಣಾ ಧಿಕಾರಿ ಎನ್‌. ಸೋಮಶೇಖರ್‌, ಅಕ್ಷರ ದಾಸೋಹದ ಪಾತಲಿಂಗಪ್ಪ, ಕೆ.ಎಚ್‌. ಸಣ್ಣಯಲ್ಲಪ್ಪ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಶ್ರೀನಿವಾಸ್‌, ತಿಪ್ಪೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next