Advertisement
ತಾಲೂಕಿನ ಫಕ್ಕುರ್ತಿ, ಅಶೋಕಸಿದ್ದಾಪುರ, ಗೌರಸಮುದ್ರ ಕೆರೆ, ಚಿಕ್ಕನಹಳ್ಳಿ, ಭಟ್ರಹಳ್ಳಿ, ರಾಯಪುರ ಕೆರೆ, ಗುಂಡ್ಲೂರು, ಕೋನಸಾನಗರ ಕೆರೆ ಸೇರಿದಂತೆ ಪಟ್ಟಣದ ಕೂಗೆಗುಡ್ಡದ ಕೆರೆ, ದವಳಪ್ಪನಕುಂಟೆ, ಊರುಬಾಗಿಲಹೊಂಡ ಹಾಗೂ ಇನ್ನಿತರ ಕೆರೆ ಕುಂಟೆಗಳಿಗೆ ಅಲ್ಪ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಹಲವಾರು ವರ್ಷಗಳಿಂದ ಸಕಾಲದಲ್ಲಿ ಉತ್ತಮವಾಗಿ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯುವ ಹನಿ ನೀರಿಗೂ ಪರದಾಡುವಂತಾಗಿತ್ತು.
Related Articles
Advertisement
ಪಟ್ಟಣದ ಘಟಗಿನಬೋರನಾಯಕನ ಹಟ್ಟಿಯ ಬಿ. ಗಿರಿಧರ ಮಾತನಾಡಿ, ದವಳಪ್ಪನಕುಂಟೆಯ ನೀರನ್ನು ಪಟ್ಟಣದ ಜನತೆಗೆ ಕುಡಿಯುವ ನೀರಿಗಾಗಿಬಳಸಲಾಗುತ್ತಿದೆ. ಹಾಗಾಗಾಇ ಆ ಜಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ. ಚಿಕನ್, ಮಟನ್, ಚರ್ಮದ ಅಂಗಡಿಯವರು ತ್ಯಾಜ್ಯ ಹಾಕುವುದರಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ನೀರಿನ ಸೇವನೆಯಿಂದ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ತ್ಯಾಜ್ಯ ಹಾಕದಂತೆ ಸೂಕ್ತ ಕ್ರಮ ಕೈಗೊಂಡು ಅಂಥವರ ವಿರುದ್ಧ ದಂಡ ವಿ ಧಿಸಬೇಕು. ಗೃಹ ತ್ಯಾಜ್ಯ ಹಾಕುವುದರಿಂದ ಹೂಳು ತುಂಬುವುದರಿಂದ ತ್ಯಾಜ್ಯ ಹಾಕದಂತೆ ಕಾನೂನು ಕ್ರಮ ಕೈಗೊಂಡು ಈ ನೀರನ್ನು ಸಂರಕ್ಷಿಸಿ ಪಟ್ಟಣದ ಜನರಿಗೆ ಕುಡಿಯಲು ಪೂರೈಕೆ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಪಂ ಸದಸ್ಯ ಮಂಜಣ್ಣ, ಇಂಜಿನಿಯರ್ ವಿಶ್ವನಾಥ, ಮುಖಂಡರಾದ ಪಿ.ಆರ್. ಸಿದ್ದಣ್ಣ, ಶಿವಲಿಂಗ, ಗೋಪಾಲ, ಅರ್ಜುನ, ಭೀಮಣ್ಣ, ಗುತ್ತಿಗೆದಾರ ಬಸವ ರೆಡ್ಡಿ ಹಾಗೂ ಪಪಂ ಸಿಬ್ಬಂದಿ ಇದ್ದರು.