Advertisement

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

10:23 AM May 05, 2024 | Team Udayavani |

ಕೊಪ್ಪಳ: ಕೊಪ್ಪಳ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಯದುವೀರ್ ಒಡೆಯರ್ ಅವರು ದಲಿತರ ಮನೆಯಲ್ಲಿ ಉಪಹಾರ ಸೇವಿಸಿ ಗಮನ ಸೆಳೆದಿದ್ದಾರೆ.

Advertisement

ಕೊಪ್ಪಳದ 12ನೇ ವಾರ್ಡಿನ ಬಸವೇಶ್ವರ ನಗರದಲ್ಲಿನ ಮಂಜುನಾಥ ಟಪಾಲ್ ಅವರ ಮನೆಯಲ್ಲಿ ಇಡ್ಲಿ, ಶಿರಾ, ಮಂಡಾಳು ಒಗ್ಗರಣೆ ಉಪಹಾರ ಸೇವನೆ ಮಾಡಿದರು. ಅವರಿಗಾಗಿ ಹಾಕಿದ್ದ ಪ್ರತ್ಯೇಕ ಕುರ್ಚಿಯಲ್ಲಿ ಕುಳಿತುಕೊಳ್ಳದೆ ಸಾಮಾನ್ಯರ ಸಾಲಿನಲ್ಲಿ ಕುಳಿತು ಉಪಹಾರ ಸೇವನೆ ಮಾಡಿದರು.

ಬಳಿಕ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಪರ ಮತಯಾಚನೆ ಮಾಡಿದರು.

ಗವಿಮಠಕ್ಕೆ ಭೇಟಿ

Advertisement

ಕೊಪ್ಪಳದ ಗವಿಮಠಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದರು. ಕತೃ ಗದ್ದುಗೆ ದರ್ಶನ ಪಡೆದ ಯದುವೀರ್, ಬಳಿಕ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳ ಭೇಟಿ ಮಾಡಿದರು. ಕುಶಲೋಪರಿ ವಿಚಾರಿಸಿದ ಗವಿಸಿದ್ದೇಶ್ವರ ಶ್ರೀಗಳು ಗವಿಮಠದ ಇತಿಹಾಸ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next