Advertisement

ಮೂರ್ನಾಡು ಶ್ರೀಅನ್ನಪೂರ್ಣೇಶ್ವರಿ ದೇವಾಲಯ: ಹನುಮ ಜಯಂತಿ

11:12 PM Apr 23, 2019 | sudhir |

ಮಡಿಕೇರಿ: ಮೂರ್ನಾಡು ಗಾಂಧಿನಗರದ ಶ್ರೀಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

Advertisement

ಹನುಮ ಮೂರ್ತಿಗೆ ಎಳನೀರು ಅಭಿಷೇಕ, ಹಾಲು ಅಭಿಷೇಕ, ಜೇನು ಅಭಿಷೇಕ, ತುಪ್ಪದ ಅಭಿಷೇಕ ಮಾಡಲಾಯಿತು. ಸತ್ಯನಾರಾಯಣ ಪೂಜೆ ಮತ್ತು ಅನ್ನಪೂರ್ಣೇಶ್ವರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅರ್ಚಕ ಮಹಾಬಲೇಶ್ವರ ಭಟ್‌ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.

ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಜಯಂತಿ ಶುಭ, ತಕ್ಕ ಮುಖ್ಯಸ್ಥ ಗ್ರೇಸಿ, ಸದಸ್ಯರಾದ ಯಶೋಧಾ, ಅನ್ನಪೂರ್ಣೆಶ್ವರಿ ನೃತ್ಯ ಶಾಲೆಯ ಶಿಕ್ಷಕಿ ಕಾವ್ಯಶ್ರೀ, ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್‌ ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next