Advertisement

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

01:32 AM Apr 29, 2024 | Team Udayavani |

ಭೋಪಾಲ್‌: ಪ್ರಿಯಾಂಕಾ ವಾದ್ರಾ ಮಂಗಳಸೂತ್ರ ಧರಿಸದೇ ಇರುವುದನ್ನು ನೋಡಿ ಜವಾಹರ್‌ಲಾಲ್‌ ನೆಹರೂ ಆತ್ಮ ಕೊರಗುತ್ತದೆ ಎಂದು ಮಧ್ಯಪ್ರದೇಶ ಸಿಎಂ ಮೋಹನ್‌ ಯಾದವ್‌ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ್ದ ಪ್ರಿಯಾಂಕಾ ದೇಶಕ್ಕಾಗಿ ನನ್ನ ತಾಯಿ ತನ್ನ ಮಾಂಗಲ್ಯವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳಿದ್ದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಸಿಎಂ, ಪ್ರಿಯಾಂಕಾ ಮಂಗಳ ಸೂತ್ರ ಧರಿಸದೇ ಇರುವುದನ್ನು ನೋಡಿ ನೆಹರೂ ಆತ್ಮ ಸಂಕಟಪಡುತ್ತಿರಬಹುದು ಎಂದರು. ಗಾಂಧಿ ಕುಟುಂಬದ ಬಗ್ಗೆ ಮಾತನಾಡಿದ ಮೋಹನ್‌, ಅವರೆಲ್ಲರೂ ನಕಲಿ ಗಾಂಧಿಗಳಾಗಿದ್ದಾರೆ. ವೋಟಿಗಾಗಿ ಈ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next