Advertisement

ಆರ್‌ಎಸ್‌ಎಸ್‌-ನೇತಾಜಿ ಗುರಿ ಒಂದೇ: ಮೋಹನ್‌ ಭಾಗವತ್‌

11:55 PM Jan 23, 2023 | Team Udayavani |

ಕೋಲ್ಕತ: ಆರ್‌ಎಸ್‌ಎಸ್‌ ಮತ್ತು ನೇತಾಜಿ ಸುಭಾಶ್‌ಚಂದ್ರ ಬೋಸ್‌ ಅವರ ವಿಚಾರಧಾರೆಗಳು ಒಂದೇ ಆಗಿದ್ದವು ಎಂದು ಸಂಘಟನೆಯ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ಕೋಲ್ಕತದಲ್ಲಿ ಮಾತನಾಡಿದ ಅವರು, ನೇತಾಜಿ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಅವರಿಂದ ನಾವು ಆ ಗುಣಗಳನ್ನು ಪಡೆದು ಕೊಳ್ಳಬೇಕಿದೆ. ಅವರು ಕಟ್ಟಲು ಬಯಸಿದ್ದ ದೇಶ ಇನ್ನೂ ನಿರ್ಮಾಣವಾಗಿಲ್ಲ, ಅದಕ್ಕಾಗಿ ಶ್ರಮಿಸಬೇಕಿದೆ. ಬೋಸ್‌ ಮೊದಲು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದರು. ಆದರೆ ಸತ್ಯಾಗ್ರಹ, ಆಂದೋಲನಗಳು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಾಗುವುದಿಲ್ಲ ಎಂದು ಖಚಿತವಾ ದಾಗ, ಇನ್ನೊಂ ದು ದಿಕ್ಕಿನಲ್ಲಿ ಹೋರಾಟ ನಡೆಸಿದರು. ಆರ್‌ಎಸ್‌ಎಸ್‌ – ಬೋಸ್‌ ದಾರಿಗಳು ಬೇರೆ ಯಾಗಿ ರಬಹುದು ಗುರಿ ಮಾತ್ರ ಒಂದೇ’ ಎಂದು ಮೋಹನ್‌ ಭಾಗ ವತ್‌ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ನೇತಾಜಿ ಮತ್ತು ಆರ್‌ಎಸ್‌ಎಸ್‌ ವಿಚಾರಧಾರೆಗಳು ಸಂಪೂರ್ಣ ಭಿನ್ನ ಎಂದು ಸ್ವತಃ ನೇತಾಜಿ ಪುತ್ರಿ ಅನಿತಾ ಬೋಸ್‌ ಟೀಕಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next