Advertisement

Sandalwood; ಮುಕ್ತ ಮನಸು.. ಹೊಸಬರ ಕನಸು

06:19 PM Apr 01, 2024 | Team Udayavani |

ಸಂಪೂರ್ಣ ಹೊಸಬರೇ ಸೇರಿ ಮಾಡಿರುವ “ಮುಕ್ತ ಮನಸು’ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮೈಸೂರು ಮೂಲದ ವೆಂಕಟೇಶ್‌ ಬಂಡವಾಳ ಹೂಡಿದ್ದಾರೆ. ಆರ್‌.ಸಿ. ರಂಗಶೇಖರ್‌ ಈ ಸಿನಿಮಾದ ನಿರ್ದೇಶಕರು.

Advertisement

ಟ್ರೇಲರ್‌ ರಿಲೀಸ್‌ ವೇಳೆ ಮಾತನಾಡಿದ ನಿರ್ದೇಶಕರು,”ಪ್ರೇಮಿಗಳು ಯಾರೇ ಆಗಿರಲಿ, ಮುಕ್ತವಾಗಿ ಯಾವುದೇ ತರಹದ ಕಲ್ಮಶ ಇಲ್ಲದ ಪ್ರೀತಿಯು ಹೇಗೆ ಕೊನೆ ತನಕ ಉಳಿದುಕೊಳ್ಳುತ್ತದೆ, ಅದು ಹೇಗಿರುತ್ತದೆ. ಹಳ್ಳಿಯಿಂದ ಪಟ್ಟಣಕ್ಕೆ ಓದಲು ಬರುವ ನಾಯಕಿಯ ಪಯಣದಲ್ಲಿ ಒಬ್ಬನೊಂದಿಗೆ ಲವ್‌ ಬೆಸೆಯುತ್ತದೆ. ಮನೆಯಲ್ಲಿ ವಿರೋಧ ಎದುರಾದಾಗ ಮುಕ್ತ ಮನಸುಗಳ ಪ್ರೀತಿ ಯಾವ ಹಂತಕ್ಕೆ ತಲುಪುತ್ತದೆ. ಕೊನೆಗೆ ಇಬ್ಬರು ಒಂದಾಗುತ್ತಾರಾ? ಎಂಬುದನ್ನು ಕಮರ್ಷಿಯಲ್‌ ರೀತಿಯಲ್ಲಿ ತೋರಿಸಲಾಗಿದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು.

ಮೈಸೂರಿನ ಮೋಹನ್‌ ರಂಗನಾಥ್‌ ನಾಯಕನಾಗಿ ನಟಿಸಿದ್ದು, ಆಟೋ ಚಾಲಕನ ಪಾತ್ರ ಮಾಡಿದ್ದಾರೆ. ಮಾನ್ಯಈ ಚಿತ್ರದ ನಾಯಕಿ. ಚಿತ್ರದ ತಾರಾಗಣದಲ್ಲಿ ಶೋಭರಾಜ್‌, ರಮೇಶ್‌ ಪಂಡಿತ್‌, ಅಪರ್ಣ, ನಾಗರತ್ನ, ಸೆಂಚುರಿಗೌಡ, ಜಾನು, ಮಂಜು ಬಿಳಿಗೆರೆ, ಮಧು ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ. ರವಿ ಛಾಯಾಗ್ರಹಣ, ಕೌರವ ವೆಂಕಟೇಶ್‌ ಸಾಹಸ, ಪ್ರಮೋದ್‌-ಸತ್ಯ ನೃತ್ಯ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next