Advertisement

ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ- ಭಾಯಂದರ್‌ ಶಾಖೆ: ಸಂತಾಪ ಸೂಚಕ ಸಭೆ

02:44 PM Sep 04, 2021 | Team Udayavani |

ಮುಂಬಯಿ: ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಮೀರಾ-ಭಾಯಂದರ್‌ ಶಾಖೆಯ ವತಿಯಿಂದ ಸಮಿತಿಯ ಸಕ್ರಿಯ ಸದಸ್ಯರಾಗಿದ್ದ ದಿ| ಶಂಕರ ರಾಜು ಕೋಟ್ಯಾನ್‌ ಅವರಿಗೆ ಸಂತಾಪ ಸೂಚಕ ಸಭೆ ಆ. 21ರಂದು ಶಾಖೆಯ ಕಾರ್ಯಾಲಯದಲ್ಲಿ ಸಂಜೆ 5ರಿಂದ ನಡೆಯಿತು.

Advertisement

ಸಮಿತಿಯ ಕಾರ್ಯಾದರ್ಶಿ ಗಂಗಾಧರ ಬಂಗೇರ ಅವರು ಶಂಕರ್‌ ಕೋಟ್ಯಾನ್‌ ಅವರು ಶಾಖೆಗೆ ಸಲ್ಲಿಸಿದ ಸೇವೆಯ ಕುರಿತು ಮಾತನಾಡಿ, ಶಾಖೆಯ ಪ್ರಾರಂಭದ ದಿನಗಳಿಂದ ಇತ್ತೀಚೆಗಿನವರೆಗೆ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡು ಅದರಲ್ಲೂ ಕ್ರೀಡಾರಂಗದಲ್ಲಿ ಅವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿದರು.

ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್‌ ಕುಂದರ್‌ ಅವರು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸುವಂತೆ ಎರಡು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಅವರ ಅಗಲುವಿಕೆಯು ಶಾಖೆಗೆ ತುಂಬಲಾರದ ನಷ್ಟವಾಗಿದೆ. ಶಂಕರ್‌ ರಾಜು ಕೋಟ್ಯಾನ್‌ ಅವರು ನನಗೆ ಚಿರಪರಿಚಿತರಾಗಿದ್ದು, ಶಾಖೆಗೆ ಪ್ರತಿಯೊಂದು ವಿಧದಲ್ಲೂ ಸಂಪೂರ್ಣ ಸಹಕಾರ ನೀಡಿದ್ದಾರೆ. ಎಲ್ಲರೊಡನೆ ಬೆರೆತು, ಎಲ್ಲರ ಪ್ರೀತಿಗೆ ಪಾತ್ರರಾದ ಅವರ ನಡೆನುಡಿ ನಮಗೆಲ್ಲ ಮಾರ್ಗದರ್ಶಿಯಾಗಿದೆ. ನಾವೆಲ್ಲರು ಒಗ್ಗಟ್ಟು ಮತ್ತು ಒಮ್ಮತದಿಂದ ಶಾಖೆ ಹಾಗೂ ಮಂಡಳಿಯ ಏಳ್ಗೆಗೆ ಕೆಲಸ ಮಾಡಿದರೆ ಅದೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗುತ್ತದೆ ಎಂದರು.

ಇದನ್ನೂ ಓದಿ:ಡೆಲಿವರಿ ಬಾಯ್ಸ್ ಕೈಯಿಂದ ಹೊರಬಂದ ಟ್ರೇಲರ್‌: ದರ್ಶನ ನೀಡಲು ‘ಡಿಯರ್‌ ಸತ್ಯ’ ರೆಡಿ

ಸಭಿಕರ ವತಿಯಿಂದ ಉಪಾಧ್ಯಕ್ಷ ಧನಂಜಯ್‌ ಸಾಲ್ಯಾನ್‌, ಕೋಶಾಧಿಕಾರಿ ತಿಲಕ್‌ ಎನ್‌. ಸುವರ್ಣ, ಜತೆ ಕಾರ್ಯದರ್ಶಿ ಸಂದೀಪ್‌ ಕುಂದರ್‌, ಜತೆ ಕೋಶಾಧಿಕಾರಿ ಹರೀಶ್‌ ಕೋಟ್ಯಾನ್‌, ಸದಸ್ಯರಾದ ಯೋಗೀಶ್‌ ಸಾಲ್ಯಾನ್‌ ಮತ್ತು ಯುವ ವಿಭಾಗದ ಕಾರ್ಯದರ್ಶಿ ಪ್ರಮೋದ್‌ ಪುತ್ರನ್‌ ಅವರು ನುಡಿನಮನ ಸಲ್ಲಿಸಿದರು. ಮಹಿಳಾ ವಿಭಾಗದ ಪದಾಧಿಕಾರಿಗಳು ಮತ್ತು ಶಾಖೆಯ ಸದಸ್ಯರು ಮೃತರ ನಿವಾಸಕ್ಕೆ ತೆರಳಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next