Advertisement

ಮೋದಿ ಭಾಷಣಕ್ಕೆ ಮಾತ್ರ ಸೀಮಿತ: ರಮೇಶ್‌ಕುಮಾರ್‌

12:54 PM Mar 08, 2017 | Team Udayavani |

ಕೆ.ಆರ್‌.ನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಕೇವಲ ಭಾಷಣಕ್ಕೆ ಮಾತ್ರ ಸೀಮಿತ ಗೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಟೀಕಿಸಿದರು. ಪಟ್ಟಣದ ಹಳೆ ಹೆರಿಗೆ ಆಸ್ಪತ್ರೆಯಲ್ಲಿ ನಿರ್ಮಾಣ ಮಾಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

Advertisement

ಮೋದಿಯವರು ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಚುನಾವಣೆ ಸಮಯದಲ್ಲಿ ಹೇಳಿದ ಯಾವ ಕಾರ್ಯವೂ ಅನುಷ್ಠಾನಗೊಂಡಿಲ್ಲ. ಕಪ್ಪು ಹಣ ಪತ್ತೆ ಹಚ್ಚುತ್ತೇವೆ ಎಂದು ಹೇಳಿದ್ದ ಪ್ರಧಾನಿಗಳು ಈವರೆಗೂ ಒಬ್ಬನನ್ನು ಕೂಡ ಗುರುತಿಸಿ ಜೈಲಿಗೆ ಕಳುಹಿಸಿರುವ ಉದಾಹರಣೆಗಳು ಇಲ್ಲ ಎಂದು ತಿಳಿಸಿದರು.

ದೇಶದಲ್ಲಿ 1 ಲಕ್ಷ ಕೋಟಿ ವರೆಗೂ ಸಾಲ ಪಡೆದು ಸುಸ್ತಿ ಆಗಿರುವವರು ಇದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ಮಾತ್ರ ರೈತರು ಎಂದ ಸಚಿವರು ಕೇಂದ್ರ ಸರ್ಕಾರ ಕೂಡಲೇ ಕಪ್ಪು ಹಣ ಇರುವವರನ್ನು ಗುರುತಿಸಿ ಮತ್ತು ಸುಸ್ತಿದಾರ ಉದ್ಯಮಿಗಳನ್ನು ಜೈಲಿಗೆ ಹಾಕಿ ಅವರಿಂದ ಹಣ ಪಡೆದು ರೈತರಿಗೆ ನೀಡಬೇಕು. ಆಗ ಮಾತ್ರ ರೈತರ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯ ಎಂದರು.

ಭಾರತದ ಸಂಸ್ಕೃತಿಯನ್ನು ಹಾಳು ಮಾಡುವ ಚಲನಚಿತ್ರಗಳು ಮತ್ತು ಧಾರವಾಹಿ ಗಳು ಕಪ್ಪು ಹಣ ಹೊಂದಿರುವ ಒಡೆಯರಿಂದ ನಿರ್ಮಾಣವಾಗುತ್ತಿವೆ. ಆದರೆ ನಮ್ಮದು ಉತ್ತಮ ಸಂಸ್ಕೃತಿ ಹೊಂದಿರುವ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯವರು ತಡೆಯುವಲ್ಲಿ ವಿಫ‌ಲಗೊಂಡಿದ್ದಾರೆ ಎಂದು ಆರೋಗ್ಯ ಮತ್ತು ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಟೀಕಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next