Advertisement

ಮೋದಿ ಭಾಷಣಕ್ಕೆ ಸೀಮಿತ

11:24 AM Apr 19, 2019 | Team Udayavani |

ಬೆಂಗಳೂರು: ಕರ್ನಾಟಕ ಸರ್ಕಾರವನ್ನು ದುರ್ಬಲ ಎಂದು ಕರೆಯುವ ಪ್ರಧಾನಿ ನರೇಂದ್ರ ಮೋದಿ, ಬರೀ ಭಾಷಣಗಳಿಗೆ ಸೀಮಿತವಾಗಿ ತಾವೇ ದುರ್ಬಲರಾಗಿದ್ದಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ತಿರುಗೇಟು ನೀಡಿದೆ.

Advertisement

ಲಲಿತ್‌ ಮೋದಿ, ವಿಜಯ್‌ ಮಲ್ಯ, ಚೋಕ್ಸಿ ಸೇರಿ ಅನೇಕರು ಸಾವಿರಾರು ಕೋಟಿ ರೂ. ವಂಚಿಸಿ ಪರಾರಿಯಾಗಿದ್ದಾರೆ. 1,800ಕ್ಕೂ ಹೆಚ್ಚು ಭಯೋತ್ಪಾದಕರ ದಾಳಿ, 400ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ರೂಪಾಯಿ ಮೌಲ್ಯ ಕುಸಿದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋಟ್ಯಂತರ ಉದ್ಯೋಗ ನಷ್ಟವಾಗಿದೆ. ರೈತರ ಸಾಲ ಮನ್ನಾ ಮಾಡುವ ಯೋಗ್ಯತೆಯಿಲ್ಲ.

ಲಕ್ಷಾಂತರ ರೈತರು ಬೀದಿಗಿಳಿದರೂ ಸ್ಪಂದಿಸದ, ಆದಾಯ ದ್ವಿಗುಣ ಎಂದು ಸುಳ್ಳು ಹೇಳಿದ, ರೈತ ಕುಟುಂಬಕ್ಕೆ ದಿನವೊಂದಕ್ಕೆ 16 ರೂ.ಕೊಡುತ್ತೇನೆಂದು ಅವಮಾನಿಸಿದ ನಿಮಗೆ, ರೈತರ ಸಾಲ ಮನ್ನಾ ಮಾಡಿರುವ ಮೈತ್ರಿ ಸರ್ಕಾರದ ಬಗ್ಗೆ ಚಕಾರವೆತ್ತುವ ಕನಿಷ್ಠ ನೈತಿಕತೆಯೂ ಇಲ್ಲ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next