Advertisement

ಮೋದಿ ಸಾಧನೆ ಮನೆ ಮನೆಗೆ ತಿಳಿಸಿ: ಶೋಭಾ

01:00 AM Feb 25, 2019 | Harsha Rao |

ಕುಂದಾಪುರ: ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದ ಸರಕಾರದ ಸಾಧನೆಯನ್ನು ಮನೆ ಮನೆಗೆ ತಿಳಿಸಿ ಹೇಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಅವರು ರವಿವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಹಾಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ರವಿವಾರ ದೇಶಾದ್ಯಂತ ಮಹಾಸಂಪರ್ಕ ಅಭಿಯಾನ ನಡೆಯುತ್ತಿದೆ. ಮಾ.26ರಂದು ಮಹಿಳಾ ಮೋರ್ಚಾ ವತಿಯಿಂದ ದೇಶಾದ್ಯಂತ ಸಂಜೆ 7 ಗಂಟೆಗೆ ಕಮಲಜ್ಯೋತಿ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸರಕಾರದ ಉಜ್ವಲ ಹಾಗೂ ವಿವಿಧ ಯೋಜನೆಗಳಲ್ಲಿ ಫ‌ಲಾನುಭವಿ ಮಹಿಳೆಯರು ಒಂದೆಡೆ ಸೇರಿ ಕಮಲದ ಆಕಾರದಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮ ಇದಾಗಿದೆ. ಮಾ.28ರಂದು ಮೋದಿ ಅವರು ಕಾರ್ಯಕರ್ತರ ಜತೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಲಿದ್ದಾರೆ. ಮಾ.2ರಂದು ಯುವ ಮೋರ್ಚಾ ವತಿಯಿಂದ ಬೈಕ್‌ ರ್ಯಾಲಿ ನಡೆಯಲಿದೆ.

ಈಗಾಗಲೇ ನನ್ನ ಮನೆ ಬಿಜೆಪಿ ಮನೆ ಎಂಬ ಅಭಿಯಾನ ಯಶಸ್ವಿಯಾಗಿದೆ. ಈ ಧ್ವಜ ಚುನಾವಣೆ ಮುಗಿಯುವವರೆಗೆ ಆಯಾ ಮನೆಗಳಲ್ಲಿ ಹಾರುತ್ತಿರಬೇಕು ಎಂದರು.

ಪಕ್ಷದ ಅಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿ, ಪಕ್ಷದ ಎಲ್ಲ ಕಾರ್ಯಕ್ರಮಗಳೂ ತಾಲೂಕಿನಾದ್ಯಂತ ನಡೆಯುತ್ತಿವೆ. ಮಹಾಸಂಪರ್ಕ ಅಭಿಯಾನ ಕೂಡಾ ನಡೆಯುತ್ತಿದ್ದು ಕಾರ್ಯಕರ್ತರು ಉತ್ಸಾಹದಲ್ಲಿ ಭಾಗಿಗಳಾಗಿದ್ದಾರೆ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್‌ ಕೊಡ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್‌, ಜಿಲ್ಲಾ ಕಾರ್ಯದರ್ಶಿ ಗಣಪತಿ ಶ್ರೀಯಾನ್‌, ಅಲ್ವಿನ್‌ ಡಿ’ಸೋಜಾ, ಜಾರಿಸ್‌ ಉಪಸ್ಥಿತರಿದ್ದರು.

Advertisement

ಪ್ರಧಾನ ಕಾರ್ಯದರ್ಶಿ ಶಂಕರ್‌ ಅಂಕದಕಟ್ಟೆ ಸ್ವಾಗತಿಸಿ, ಭಾಸ್ಕರ ಬಿಲ್ಲವ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next