Advertisement

ಬಿಜೆಪಿ ಗೆಲ್ಲಿಸಿ ಮೋದಿ ಕೈಬಲಪಡಿಸಿ: ಕೆ. ಉದಯ ಕುಮಾರ್‌ ಶೆಟ್ಟಿ

07:00 AM May 11, 2018 | Team Udayavani |

ಕಟಪಾಡಿ: ಬಿ.ಜೆ.ಪಿ. ಸರಕಾರ ಕರ್ನಾಟಕದಲ್ಲಿ ಇದ್ದರೆ ನೇರವಾಗಿ ಕೇಂದ್ರದ ಹಣ 100 ಪ್ರತಿಶತ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬಹುದು. ಕಾಂಗ್ರೆಸ್‌ ಶೇ. 10 ಕಮಿಶನ್‌ ಸರಕಾರ ಎನ್ನುವುದನ್ನು ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಕಾಂಗ್ರೆಸ್‌ನಿಂದ ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯದಲ್ಲಿ ಬಿ.ಜೆ.ಪಿಯನ್ನು ಗೆಲ್ಲಿಸಿ ಮೋದಿಯವರ  ಕೈ ಬಲಪಡಿಸಿ ಎಂದು ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ ಹೇಳಿದ್ದಾರೆ.

Advertisement

ಅವರು ಉದ್ಯಾವರ  ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಪರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭ ಅಭ್ಯರ್ಥಿ ಲಾಲಾಜಿ ಆರ್‌. ಮೆಂಡನ್‌, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ ಶೆಟ್ಟಿ ಪಾದೆಬೆಟ್ಟು, ಪ್ರ. ಕಾರ್ಯದರ್ಶಿ ಜಿತೇಂದ್ರ ಶೆಟ್ಟಿ , ಪ್ರಸಾದ್‌ ಶೆಟ್ಟಿ, ಜಿಲ್ಲಾ ಪಂಚಾಯತ್‌ ಅಧ್ಯಕ್ಷ  ದಿನಕರ್‌ ಬಾಬು, ಉಪಾಧ್ಯಕ್ಷೆ  ಶೀಲಾ ಕೆ. ಶೆಟ್ಟಿ, ಸದಸ್ಯೆ ಗೀತಾಂಜಲಿ ಎಂ. ಸುವರ್ಣ,  ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಗಣೇಶ್‌,  ತಾಲೂಕು ಪಂ.ಚಾಯತ್‌ ಸದಸ್ಯೆ ರಜನಿ ಆರ್‌. ಮೆಂಡನ್‌, ಸ್ಥಾನೀಯ ಸಮಿತಿ ಅಧ್ಯಕ್ಷ ವಿಲ್ಸನ್‌ ರಾಜಕುಮಾರ್‌, ವಿನೋದ್‌ ಕುಮಾರ್‌, ವಿಜಯಕುಮಾರ್‌ ಉದ್ಯಾವರ, ಸಚಿನ್‌ ಬೊಲೆj, ಸತೀಶ್‌ ಉದ್ಯಾವರ ಮೊದ ಲಾದವರು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next