Advertisement

Politics: ಗಲಭೆಕೋರರಿಗೆ ಪಾಠ ಕಲಿಸಿದ್ದ ಮೋದಿ- ಸಚಿವ ಅಮಿತ್‌ ಶಾ ಹೇಳಿಕೆ

09:31 PM Dec 16, 2023 | Pranav MS |

ಅಹಮದಾಬಾದ್‌: ಗುಜರಾತ್‌ನಲ್ಲಿ ಗಲಭೆ ಎಬ್ಬಿಸಿದವರಿಗೆ ನೆನಪಿನಲ್ಲಿ ಉಳಿಯುವಂತಹ ಪಾಠವನ್ನು ಸಿಎಂ ಆಗಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಕಲಿಸಿದ್ದರು. ಹೀಗಾಗಿಯೇ ರಾಜ್ಯದಲ್ಲಿ ಮತ್ತೆ ಇಂತಹ ಕೃತ್ಯ ಎಸಗುವ ಧೈರ್ಯ ಯಾರಿಗೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಸನಂದ್‌ನಲ್ಲಿ ಶನಿವಾರ ನಡೆದ ವಿಕಾಸಿತ ಭಾರತ ಸಂಕಲ್ಪ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, 2002ರಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಆ ವೇಳೆ ಸಂಭವಿಸಿದ ಗಲಭೆಗೆ ಕಾರಣರಾದವರಿಗೆ ಮರೆಯಲಾರದಂತಹ ಪಾಠ ಕಲಿಸಿದ್ದಾರೆ. ಅದರಿಂದಾಗಿಯೇ ಮತ್ತೆ ಇಂತಹ ಗಲಭೆ ಸೃಷ್ಟಿಸುವ ಧೈರ್ಯ ಯಾರಿಗೂ ಇಲ್ಲ ಎಂದು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಚಂದ್ರಯಾನ-3, ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದತಿ ಕೀರ್ತಿ ಮೋದಿಗೆ ಸಲ್ಲುತ್ತದೆ. ಈ ಹಿಂದೆ ನಿತ್ಯವೂ ಸ್ಫೋಟಗಳು ಸಂಭವಿಸುತ್ತಿದ್ದವು. ಅದಕ್ಕೆ ಅಂತ್ಯವೇ ಇರಲಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಪಾಕಿಸ್ತಾನಕ್ಕೂ ತಕ್ಕ ಪಾಠ ಕಲಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next