Advertisement

ಕರಾವಳಿಯಲ್ಲಿ ಮೋದಿ ಮೋಡಿ!

11:05 PM May 24, 2019 | Team Udayavani |

ಮಂಗಳೂರು: ಕರಾವಳಿಯ ಎರಡೂ ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸುವುದಕ್ಕೆ ಮುಖ್ಯ ಕಾರಣ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡಿ ಮೋಡಿ ಮಾಡಿದ್ದು ಎಂಬುದು ಸ್ಪಷ್ಟ.

Advertisement

ಮೋದಿ ಲೋಕಸಭೆ ಚುನಾವಣೆಗಷ್ಟೇ ಅಲ್ಲ; ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಪ್ರಚಾರಕ್ಕಾಗಿ ಕರಾವಳಿ ಭಾಗಕ್ಕೆ ಬಂದು ಹೋಗಿದ್ದರು. ಕೇವಲ ಎರಡು ಸ್ಥಾನ ಹೊಂದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಇತ್ತೀಚೆಗಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಎರಡೂ ಸಂದರ್ಭ ಅವರು ಬಂದದ್ದು ಗಮನಾರ್ಹ.

ಇಷ್ಟು ಮಾತ್ರ ಅಲ್ಲದೆ ಇನ್ನಿತರ ಸಂದರ್ಭಗಳಲ್ಲೂ ಒಂದೆರಡು ಬಾರಿ ಜಿಲ್ಲೆಗೆ ಕಾಲಿರಿಸಿ ತನ್ನ ಹವಾ ಇಲ್ಲಿ ಸದಾ ಇರುವಂತೆ ನೋಡಿಕೊಂಡಿದ್ದರು ಮೋದಿ.

2014ರ ಚುನಾವಣೆ ವೇಳೆ ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಮೋದಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಪ್ರಚಾರ ಭಾಷಣ ಮಾಡಿದ್ದರು. ಆ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಿತ್ತು. 2018ರ ವಿಧಾನಸಭಾ ಚುನಾವಣೆ ಸಂದರ್ಭ ಅವರು ಇಲ್ಲಿ ಪ್ರಚಾರ ನಡೆಸಿದ್ದು, ದ.ಕ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ ಉಡುಪಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next