Advertisement

ಶಿಶು ಜೀವ ಉಳಿಸಿದ ಮೋದಿ!

03:45 AM Mar 07, 2017 | Team Udayavani |

ನವದೆಹಲಿ: ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಪ್ರಧಾನಿ ಮೋದಿ, ಅಲ್ಲಿದ್ದುಕೊಂಡೇ ದೆಹಲಿಯಲ್ಲಿ ಮಗುವಿನ ಜೀವ ಉಳಿಸಿದ್ದಾರೆ! ಅಸ್ಸಾಂನ ಧೃವಜ್ಯೋತಿ ಕಲಿತಾರ 8 ದಿನದ ಹಸುಗೂಸಿನ ಶ್ವಾಸಕೋಶದಲ್ಲಿ ಗಂಭೀರ ಸಮಸ್ಯೆಯಿತ್ತು. 

Advertisement

ಇದನ್ನು ಪತ್ತೆ ಹಚ್ಚಿದ ದಿಬ್ರೂಗಡ ನಗರದ ಆಸ್ಪತ್ರೆ ವೈದ್ಯರು, ಪರಿಸ್ಥಿತಿ ಕೈ ಜಾರುತ್ತಿದೆ ಎಂದರಿತು ಕೂಡಲೇ ಏರ್‌ ಆ್ಯಂಬುಲೆನ್ಸ್‌ನ ಮೂಲಕ ಮಗುವನ್ನು ದೆಹಲಿಯ ಗಂಗಾರಾಮ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಿದರು. ಸಂಜೆ 7.30ಕ್ಕೆ ಆ್ಯಂಬುಲೆನ್ಸ್‌ ಇಂದಿರಾಗಾಂಧಿ ವಿಮಾನನಿಲ್ದಾಣದಲ್ಲಿ ಇಳಿಯಲಿತ್ತು. ದೆಹಲಿ ಟ್ರಾಫಿಕ್‌ ಜಾಮ್‌ ಅರಿತ ಆಸ್ಪತ್ರೆಯ ವೈದ್ಯರು “ದ ಡೈಲಿ ಮೇಲ್‌’ನ ವರದಿಗಾರರೊಬ್ಬರಿಗೆ ಈ ವಿಷಯ ತಿಳಿಸಿ, “ಆ ಸಮಯದಲ್ಲಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಯವರೆಗಿನ ಟ್ರಾಫಿಕ್‌ ಕ್ಲಿಯರ್‌ ಮಾಡಿಸೋಕ್ಕೆ ಸಾಧ್ಯವೇ?’ ಎಂದು ಕೇಳಿದ್ದಾರೆ. ಕೂಡಲೇ ಈ ವರದಿಗಾರ ದೆಹಲಿ ಪೊಲೀಸ್‌ ವಿಶೇಷ ಆಯುಕ್ತರಿಗೆ (ಟ್ರಾಫಿಕ್‌) ಈ ಬಗ್ಗೆ ಮನವಿ ಮಾಡಿ, ಅದರ ಪ್ರತಿಯನ್ನು ಪ್ರಧಾನಿ ಮೋದಿಯವರ ವೈಯಕ್ತಿಕ ಇಮೇಲ್‌ಗ‌ೂ ಕಳುಹಿಸಿದ್ದಾರೆ. 

ವಾರಾಣಸಿಯಲ್ಲಿ ಪ್ರಚಾರದಲ್ಲಿದ್ದ ಪ್ರಧಾನಿ ಇ-ಮೇಲ್‌ ಓದಿ ಕಚೇರಿಗೆ ಮಾಹಿತಿ ನೀಡಿದರು. ಅದರಂತೆ ಎಲ್ಲವೂ ನಡೆದು, ಮಗುವಿನ ಪ್ರಾಣ ಉಳಿಯಿತು.

ಬ್ಯಾಟರಿ ಆಫ್ ಆಗ್ತಿತ್ತು!
ಮಗುವಿಗೆ ಜೀವಾಧಾರ‌ವಾಗಿದ್ದ ವೆಂಟಿಲೇಟರ್‌ನ ಬ್ಯಾಟರಿ ಇನ್ನೂ 7 ನಿಮಿಷ ತಡವಾಗಿದ್ದರೆ ಆಫ್ ಆಗುತ್ತಿತ್ತು. ಟ್ರಾಫಿಕ್‌ನಿಂದಾಗಿ ಸಂಚಾರಕ್ಕೆ ತೊಂದರೆಯಾಗಿದ್ದರೆ ಪ್ರಾಣಕ್ಕೆ ಅಪಾಯವಿತ್ತು ಎನ್ನುತ್ತಾರೆ ವೈದ್ಯರು. ಮಗುವಿನ ಜೀವ ಉಳಿಸಿದ್ದಕ್ಕೆ ಪೋಷಕರು ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next