Advertisement

ಮೋದಿಯದು ಫ್ಯಾಸಿಸ್ಟ್‌ ಸರಕಾರ

01:16 AM Oct 06, 2019 | Sriram |

ಮಂಗಳೂರು: ಪ್ರಧಾನಿ ಮೋದಿ ಅವರದು ಫ್ಯಾಸಿಸಂ ನೀತಿಯ ಸರಕಾರ. ಹಾಗಾಗಿಯೇ ತನ್ನ ವಿರುದ್ಧ ಯಾರೂ ಮಾತನಾಡುವುದನ್ನು ಅವರು ಸಹಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

Advertisement

ಅವರು ಶನಿವಾರ ಚಿಕ್ಕ ಮಗಳೂರಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಲುವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿ ಳಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದ ನೆರೆ ಪರಿಹಾರಕ್ಕಾಗಿ ಕನಿಷ್ಠ ಪಕ್ಷ 5 ಸಾವಿಸ ಕೋಟಿ ರೂ. ಪರಿಹಾರ ತಾತ್ಕಾಲಿಕವಾಗಿ ಕೇಳಿದ್ದೆವು. ಆದರೆ ಎರಡು ತಿಂಗಳ ಬಳಿಕ ಕೇವಲ 1,200 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ನೀಡಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಖಜಾನೆ ಖಾಲಿಯಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ; ಖಜಾನೆ ಖಾಲಿ ಅಂದರೆ ಏನು ಅರ್ಥ? ಖಜಾನೆ ಬರಿದಾಗಲು ಸಾಧ್ಯವೇ ಇಲ್ಲ. ಏಕೆಂದರೆ ಪ್ರತೀ ತಿಂಗಳು ತೆರಿಗೆ ಸಂಗ್ರಹವಾಗುತ್ತಲೇ ಇರುತ್ತದೆ. ಯಡಿಯೂರಪ್ಪ ಅವರಿಗೆ ಹಣಕಾಸಿನ ಜ್ಞಾನ ಇದೆಯೇ ಇಲ್ಲವೇ ಎಂಬ ಸಂಶಯ ಮೂಡುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next