Advertisement

ಮೋದಿ ಮತ್ತೆ ಪ್ರಧಾನಿ, ಸಿದ್ದರಾಮಯ್ಯ ಸ್ಥಾನ ಭದ್ರ! ಮಣ್ಣಿನ ಬೊಂಬೆ ನುಡಿದ ಭವಿಷ್ಯ…

04:52 PM Apr 11, 2024 | Team Udayavani |

ಉದಯವಾಣಿ ಸಮಾಚಾರ
ಉಪ್ಪಿನಬೆಟಗೇರಿ: ರಾಜಕೀಯದಲ್ಲಿ ಯಾವುದೇ ಏರುಪೇರಾಗದೇ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಅಬಾಧಿ ತವಾಗಲಿದೆ ಎಂದು ಹನುಮನಕೊಪ್ಪದಲ್ಲಿ ಯುಗಾದಿ ಹಬ್ಬದಂದು ಮಣ್ಣಿನ ಬೊಂಬೆ ಭವಿಷ್ಯದಿಂದ ತಿಳಿದು ಬಂದಿದೆ.

Advertisement

ಪ್ರಸಕ್ತ ವರ್ಷ ದೇಶದಲ್ಲಿ ಆಹಾರ-ನೀರಿನ ಯಾವುದೇ ಸಮಸ್ಯೆ ಉದ್ಭವಿಸಲ್ಲ. ಮುಂಗಾರು ಉತ್ತಮ, ಹಿಂಗಾರು ಆದರೂ ಆಹಾರದ ಕೊರತೆಯಾಗಲ್ಲ. ರೈತ ಮತ್ತು ದನಕರುಗಳಿಗೆ ಯಾವುದೇ ತೊಂದರೆ ಇಲ್ಲ. ಕೂಡಿಟ್ಟ ಆಹಾರ ಧಾನ್ಯಗಳಿಗೆ ಬೆಲೆ ಸಿಗುವುದೆಂದು ತಿಳಿದು ಬಂದಿದೆ.

ಮುಂಗಾರು ಬೆಳೆದ ಕಾಳುಗಳಿಗೆ ಅಕ್ಟೋಬರ್‌ -ನವೆಂಬರ್‌ ತಿಂಗಳಲ್ಲಿ ಉತ್ತಮ ಧಾರಣೆ ಸಿಗಲಿದೆ. ಹಿಂಗಾರು ಬೆಳೆಗೆ ಜನವರಿ-ಪೆಭ್ರವರಿ ತಿಂಗಳಲ್ಲಿ ಉತ್ತಮ ದರ ಬರುವುದು. ಯಾವುದೇ ರಾಜಕಾರಣಿಗಳಿಗೆ ಅವಘಡಗಳು ಸಂಭವಿಸಲ್ಲ. ಮುಂಗಾರು ಮಳೆ ಉತ್ತಮವಾಗಿದ್ದು, ಹಿಂಗಾರು ಮಳೆ ಸಾಧಾರಣವಾಗಿದೆ ಎಂದು ಗೊಂಬೆಗಳ ಭವಿಷ್ಯದಿಂದ ತಿಳಿದು ಬಂದಿದೆ.

ದೇಶದಲ್ಲಿ ದನ ಕರುಗಳಿಗೆ ಆಹಾರ-ನೀರಿನ ಸಮಸ್ಯೆ ಇರಲ್ಲ. ಪ್ರಸ್ತುತ ವರ್ಷದಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಹಿಂಗಾರು ಮಳೆ ಸಾಧಾರಣ ಇರುತ್ತದೆ. ಜಮೀನಿನಲ್ಲಿ ಬೆಳೆದ ಕಾಳುಗಳಿಗೆ ಉತ್ತಮ ಧಾರಣೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಗೊಂಬೆಗಳಿಂದ ತಿಳಿದು ಬರುತ್ತದೆ.
ನಾಗಪ್ಪ ಹಾರೋಬೆಳವಡಿ, ಹನುಮನಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next