Advertisement

ಮೃತರ ಭೂಮಿ ಕಸಿದಿದ್ದಾರೆಯೇ ಮೋದಿ?

02:23 AM May 06, 2019 | Team Udayavani |

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ ಸಿಎಂ ಆಗಿದ್ದಾಗ ನೀಡಿದ್ದ ಪ್ಲಾಟ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಆರೋಪಿಸಿದ್ದಾರೆ. ಅವರ ಪ್ಲಾಟ್ ವರ್ಗಾವಣೆ ಅಥವಾ ಮಾರಾಟ ಮಾಡುವಂತಿಲ್ಲ ಎಂದು ನಿಯಮವಿದೆ. ಆದರೆ ಅದನ್ನು ಬಿಜೆಪಿಯ ಮಾಜಿ ಅಧ್ಯಕ್ಷ ಜನ ಕೃಷ್ಣಮೂರ್ತಿ ಪ್ಲಾಟ್ ಜೊತೆಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇವರು 2007 ಸೆಪ್ಟೆಂಬರ್‌ನಲ್ಲೇ ನಿಧನರಾಗಿದ್ದಾರೆ.

Advertisement

ಜನ ಕೃಷ್ಣಮೂರ್ತಿ ಪ್ಲಾಟ್ ಅನ್ನು ಮೋದಿ ತಮ್ಮ ಪ್ಲಾಟ್ ಜೊತೆಗೆ ಸೇರಿಸಿಕೊಂಡಿದ್ದಾರೆ. ಮೃತರ ಭೂಮಿಯನ್ನು ಮೋದಿ ನುಂಗಿದ್ದಾರೆ ಎಂಬುದಾಗಿ ಖೇರಾ ಆರೋಪಿಸಿದ್ದಾರೆ. ಅಲ್ಲದೆ ಮೋದಿ ನಾಮಪತ್ರದಲ್ಲಿ ಒಂದೊಂದು ವರ್ಷದಲ್ಲೂ ಪ್ಲಾಟ್‌ನ ಸಂಖ್ಯೆಯನ್ನು ಬೇರೆ ಬೇರೆ ನಮೂದಿಸಲಾಗಿದೆ. ಒಂದು ವರ್ಷ 411 ಎಂದು ನಮೂದಿಸಲಾಗಿದ್ದರೆ, ಇನ್ನೊಮ್ಮೆ 401ಎ ಎಂದು ನಮೂದಿಸಲಾಗಿದೆ. ಅನಂತರ ನಾಲ್ಕು ಪ್ಲಾಟ್‌ಗಳಲ್ಲಿ ಇದನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆಯಾದರೂ, ಉಲ್ಲೇಖೀಸಿದ ಸಂಖ್ಯೆಗೆ ಇದು ಹೋಲಿಕೆಯಾಗುತ್ತಿಲ್ಲ ಎಂದು ಖೇರಾ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next