Advertisement

‘ದೇಶಕ್ಕೆ ಮೋದಿ- ಮಹಾರಾಷ್ಟ್ರಕ್ಕೆ ಶಿಂಧೆ’; ಮೂಲೆಗುಂಪಾದರೆ ಫಡ್ನವಿಸ್? ಏನಿದು ಜಾಹೀರಾತು?

05:33 PM Jun 13, 2023 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಹರಿದಾಡುತ್ತಿರುವಾಗಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ನೀಡಿರುವ ಜಾಹೀರಾತು ಹೊಸ ವಿವಾದದ ಕೇಂದ್ರ ಬಿಂದುವಾಗಿದೆ.

Advertisement

“ದೇಶದಲ್ಲಿ ಮೋದಿ, ಮಹಾರಾಷ್ಟ್ರದಲ್ಲಿ ಶಿಂಧೆ” ಎಂಬ ಕ್ಯಾಚ್ ಲೈನ್‌ ನೊಂದಿಗೆ ನೀಡಿರುವ ಪತ್ರಿಕಾ ಜಾಹೀರಾತು ಮಹಾರಾಷ್ಟ್ರದ ರಾಜಕೀಯ ವಲಯಗಳಲ್ಲಿ ಅನೇಕ ಗುಮಾಣಿಗಳನ್ನು ಎಬ್ಬಿಸಿದೆ. ಈ ಹಿಂದೆ, “ದೆಹಲಿ ಮೇ ನರೇಂದ್ರ ಔರ್ ರಾಜ್ಯ ಮೇ ದೇವೇಂದ್ರ” ಎಂಬ ಘೋಷಣೆ ಮಹಾರಾಷ್ಟ್ರ ರಾಜ್ಯದಲ್ಲಿ ಜನಪ್ರಿಯವಾಗಿತ್ತು.

ಖಾಸಗಿ ಚಾನೆಲ್ ಮತ್ತು ಏಜೆನ್ಸಿಯ ಇತ್ತೀಚಿನ ಜಂಟಿ ಸಮೀಕ್ಷೆಯ ಆಧಾರದಲ್ಲಿ ಏಕನಾಥ್ ಶಿಂಧೆ ಅವರು ತಮ್ಮ ಡೆಪ್ಯೂಟಿ ದೇವೇಂದ್ರ ಫಡ್ನವಿಸ್‌ ಗಿಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ ಎಂದು ಜಾಹೀರಾತು ಹೇಳುತ್ತದೆ.

ಇದನ್ನೂ ಓದಿ:Virat Kohli ಯಾಕೆ ಹಾಗೆ ಮಾಡಿದರೆಂದು ಅವರೇ ಹೇಳಬೇಕು..: ಗಂಗೂಲಿ

ಸರ್ವೆಯ ಪ್ರಕಾರ ಮಹಾರಾಷ್ಟ್ರದ ಶೇಕಡಾ 26.1 ಜನರು ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅವರನ್ನು ನೋಡಬಯಸುತ್ತಾರೆ. ಇದೇ ವೇಳೆ 23.2% ಜನರು ದೇವೇಂದ್ರ ಫಡ್ನವಿಸ್ ಅವರನ್ನು ಮುಂದಿನ ಸಿಎಂ ಆಗಿ ನೋಡುತ್ತಾರೆ.

Advertisement

ಸಮೀಕ್ಷೆಯ ಪ್ರಕಾರ ಬಿಜೆಪಿಗೆ 30.2% ಮತ್ತು ಶಿಂಧೆ ಸೇನೆ 16.2% ಜನರ ಬೆಂಬಲವನ್ನು ಹೊಂದಿದೆ ಎಂದು ಜಾಹೀರಾತು ಹೇಳುತ್ತದೆ. ಒಟ್ಟಾಗಿ, ಸಮೀಕ್ಷೆ ಮಾಡಿದ ಜನರ ಗುಂಪಿನಲ್ಲಿ ಮೈತ್ರಿಯು 46% ಕ್ಕಿಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ.

ಪ್ರಧಾನಿ ಮೋದಿ ಮತ್ತು ಏಕನಾಥ್ ಶಿಂಧೆ ಅವರು ಪ್ರಾರಂಭಿಸಿದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಸರಣಿಯಿಂದಾಗಿ ಜನಪ್ರಿಯತೆ ಹೆಚ್ಚಿದೆ ಎಂದು ಜಾಹೀರಾತು ಹೇಳಿದೆ.

ಇದರ ಮಧ್ಯೆ, ಉದ್ಧವ್ ಠಾಕ್ರೆ ಅವರ ಬಣದ ಸಂಸದ, ಸಂಜಯ್ ರಾವುತ್ ಅವರು ಪಕ್ಷವನ್ನು ಸ್ಥಾಪಿಸಿದ ಬಾಳಾಸಾಹೇಬ್ ಠಾಕ್ರೆ ಬಗ್ಗೆ ಯಾವುದೇ ಉಲ್ಲೇಖವಿಲ್ಲದೇ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಮಾಡಿದ ಜಾಹೀರಾತಿನ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next