Advertisement

Chikkamagalur: ನೆಹರು-ಇಂದಿರಾ ಬಯ್ಯುವುದು ಬಿಟ್ಟು ಮೋದಿ ಬೇರೆ ಏನೂ ಮಾಡಿಲ್ಲ: ಜೈರಾಂ ರಮೇಶ್

04:12 PM Aug 15, 2023 | Team Udayavani |

ಚಿಕ್ಕಮಗಳೂರು: ಇತಿಹಾಸ ತಿರುಚುವುದು, ಕಾಂಗ್ರೆಸ್ ಇಂದಿರಾ, ನೆಹರೂ, ರಾಜೀವ್ ರನ್ನು ಬೈಯ್ಯುವುದದು ಅಷ್ಟೆ. ನರೇಂದ್ರ ಮೋದಿ ಇಷ್ಟನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ ಎಂದು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ವಾಗ್ದಾಳಿ ನಡೆಸಿದರು.

Advertisement

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಮಣಿಪುರದ ಬಗ್ಗೆ ಏನೂ ಮಾತನಾಡುತ್ತಿಲ್ಲ, ಮೌನ ವೃತ ಮಾಡುತ್ತಿದ್ದಾರೆ. 2 ಗಂಟೆ 13 ನಿಮಿಷದ ಭಾಷಣದಲ್ಲಿ ನಾಲ್ಕು ನಿಮಿಷ ಮಾತ್ರ ಮಣಿಪುರದ ಬಗ್ಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ, ಮಣಿಪುರ್ ಮೇ ಶಾಂತಿ ಆಯೇಗಿ, ಅದು ಎಲ್ಲರಿಗೂ ಗೊತ್ತು ಎಂದರು

ಕಳೆದ 15 ತಿಂಗಳಿನಿಂದ ಮಣಿಪುರದಲ್ಲಿ ಇಂತಹಾ ಘಟನೆ ನೋಡುತ್ತಿದ್ದೇವೆ. ಕಾರಣ ಒಂದೇ ಒಂದು, ಮಣಿಪುರದಲ್ಲಿ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಸಿಎಂ ಪ್ರಚೋದನೆ ಮಾಡಿದ್ದಾರೆ, ಗೃಹ ಸಚಿವರು ಕ್ಲೀನ್ ಚಿಟ್ ಕೊಡುತ್ತಾರೆ. ಪ್ರಧಾನಿಯವರು ಚೀನಾಗೆ ಕ್ಲೀನ್ ಚೀಟ್ ಕೊಡ್ತಾರೆ, ಹೋಂ ಮಿನಿಸ್ಟರ್ ಮಣಿಪುರ ಸಿಎಂಗೆ ಕ್ಲೀನ್ ಚಿಟ್ ಕೊಡುತ್ತಾರೆ. ಪ್ರಧಾನಿಯವರು ನೋಟು ಅಮಾನ್ಯೀಕರಣ, ಜಿಎಸ್ ಟಿ, ನಿರುದ್ಯೋಗ, ಯಾವುದರ ಬಗ್ಗೆಯೂ ಹೇಳಿಲ್ಲ. ಬರೀ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಜೈರಾಂ ರಮೇಶ್ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next