Advertisement

ಐಪಿಸಿ,ಸಿಆರ್‌ಪಿಸಿ ತಿದ್ದುಪಡಿಗೆ ಸರ್ಕಾರ ಬದ್ಧ: ಅಮಿತ್‌ ಶಾ

10:04 AM Dec 09, 2019 | Sriram |

ಪುಣೆ:ದೇಶಕ್ಕೆ ಹೆಚ್ಚು ಅನುಕೂಲವಾಗುವಂತೆ ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಅಪರಾಧ ಪ್ರಕ್ರಿಯೆ ಸಂಹಿತೆ(ಸಿಆರ್‌ಪಿಸಿ)ಗೆ ತಿದ್ದುಪಡಿ ತರುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಅತ್ಯಾಚಾರ ಸೇರಿದಂತೆ ಕೆಲವು ಘೋರ ಅಪರಾಧಗಳಲ್ಲಿ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮಿತ್‌ ಶಾ ಮಾತುಗಳು ಮಹತ್ವ ಪಡೆದಿವೆ. ಐಪಿಸಿ ಮತ್ತು ಸಿಆರ್‌ಪಿಸಿಗಳಲ್ಲಿ ಬದಲಾವಣೆ ತರುವ ಕುರಿತು ಎಲ್ಲ ರಾಜ್ಯ ಸರ್ಕಾರಗಳ ಸಲಹೆಗಳನ್ನು ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವಾಲಯ ಕೋರಿದೆ.

ಪುಣೆಯಲ್ಲಿ ಭಾನುವಾರ ಡಿಜಿಪಿಗಳು ಹಾಗೂ ಐಜಿಪಿಗಳ 54ನೇ ಸಮ್ಮೇಳನದಲ್ಲಿ ಮಾತನಾಡಿದ ಶಾ ಈ ವಿಚಾರ ತಿಳಿಸಿದ್ದಾರೆ. ಜತೆಗೆ, ರಾಜ್ಯಗಳಲ್ಲಿ ಅಖೀಲ ಭಾರತ ಪೊಲೀಸ್‌ ವಿಶ್ವವಿದ್ಯಾಲಯ ಹಾಗೂ ಅಖೀಲ ಭಾರತ ವಿಧಿವಿಜ್ಞಾನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿರುವುದಾಗಿಯೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next