Advertisement

ಆಡಳಿತಕ್ಕೆ ವೇಗ ನೀಡಲು ಹೊಸ ಯೋಜನೆ: 77 ಮಂತ್ರಿಗಳನ್ನು 8 ಗುಂಪುಗಳಾಗಿ ವಿಂಗಡನೆ

09:01 AM Nov 15, 2021 | Team Udayavani |

ಹೊಸದಿಲ್ಲಿ: ಆಡಳಿತಕ್ಕೆ ಹೊಸ ವೇಗ ನೀಡಲು ಮೋದಿ ಸರಕಾರವು ಯುವ ವೃತ್ತಿಪರರನ್ನು ಸೆಳೆಯಲು ಯೋಜಿಸುತ್ತಿದೆ. ನಿವೃತ್ತ ಅಧಿಕಾರಿಗಳಿಂದ ಸಲಹೆಗಳನ್ನು ಪಡೆಯಲು ಮತ್ತು ಯೋಜನೆಯ ಮೇಲ್ವಿಚಾರಣೆಗಾಗಿ ತಂತ್ರಜ್ಞಾನದ ಅತ್ಯುತ್ತಮ ಬಳಕೆಯನ್ನು ಮಾಡುವುದರ ಜೊತೆಗೆ ಮೇಲ್ವಿಚಾರಣೆ ಮಾಡಬೇಕಾದ ಹಲವಾರು ಕ್ರಮಗಳನ್ನು ಸರ್ಕಾರ ಮುಂದಡಿಯಿಟ್ಟಿದೆ. ಇಡೀ ಮಂತ್ರಿ ಮಂಡಳಿಯ ಸದಸ್ಯರನ್ನು ಒಳಗೊಂಡ ಎಂಟು ವಿಭಿನ್ನ ಗುಂಪುಗಳನ್ನಾಗಿ ಮಾಡಿ ಆಡಳಿತಕ್ಕೆ ಹೆಚ್ಚಿನ ವೇಗ ನೀಡಲು ಮೋದಿ ಸರ್ಕಾರ ಮುಂದಾಗಿದೆ.

Advertisement

ಇದಕ್ಕಾಗಿಯೇ ಪ್ರಧಾನಿ ನೇತೃತ್ವದಲ್ಲಿ ಇತ್ತೀಚೆಗೆ ಚಿಂತನ ಶಿಬಿರಗಳನ್ನು ನಡೆಸಲಾಯಿತು. ಇವುಗಳಲ್ಲಿ, ಎಲ್ಲ ಇಲಾಖೆಗಳ ಸಚಿವರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸುಮಾರು ಐದು ಗಂಟೆಗಳ ಕಾಲ ನಡೆದ ಮೊದಲ ಶಿಬಿರದ ಅನಂತರ 77 ಸಚಿವರನ್ನು ಎಂಟು ತಂಡಗಳನ್ನಾಗಿ ವಿಭಜಿಸಲಾಯಿತು. ಈ ತಂಡಗಳು, ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳ ಅಭಿವೃದ್ಧಿಗಾಗಿ ಹಾಗೂ ಯುವ ವೃತ್ತಿಪರರನ್ನು ತಂಡದಲ್ಲಿ ನೇಮಿಸಿಕೊಳ್ಳುವ ಕೆಲಸ ಮಾಡಲಿವೆ. ಈ ಮೂಲಕ, ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ, ಚುರುಕುತನ ಹಾಗೂ ಸರಕಾರದ ಫ‌ಲಪ್ರದತೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

ಕೊನೆಯ ಚಿಂತನ-ಮಂಥನ ಸಭೆಯಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ:ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದಿಂದ ಯುಜಿಸಿ – ನೆಟ್‌ ಪ್ರವೇಶಪತ್ರ ಬಿಡುಗಡೆ

ಕೌನ್ಸಿಲ್‌ನಲ್ಲಿರುವ ಎಲ್ಲಾ 77 ಸಚಿವರು ಈ ಎಂಟು ಗುಂಪುಗಳಲ್ಲಿ ಒಂದರ ಭಾಗವಾಗಿದ್ದಾರೆ. ಪ್ರತಿ ಗುಂಪು ಒಂಬತ್ತರಿಂದ ಹತ್ತು ಸಚಿವರನ್ನು ಒಳಗೊಂಡಿದ್ದು, ಒಬ್ಬ ಕೇಂದ್ರ ಸಚಿವರನ್ನು ಗುಂಪು ಸಂಯೋಜಕರಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪ್ರತಿ ಸಚಿವರ ಕಛೇರಿಯಲ್ಲಿ ಕೇಂದ್ರದ ಪ್ರಮುಖ ಯೋಜನೆಗಳು ಮತ್ತು ನೀತಿಗಳ ಕಾರ್ಯಕ್ಷಮತೆಯ ಬಗ್ಗೆ ನವೀಕರಣಗಳನ್ನು ನೀಡುವ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುವುದು, ಆಯಾ ಸಚಿವರು ಮಾಡಿದ ನಿರ್ಧಾರಗಳನ್ನು ಮೇಲ್ವಿಚಾರಣೆ ಮಾಡಲು ಡ್ಯಾಶ್‌ಬೋರ್ಡ್ ಮತ್ತು ಸಭೆಗಳನ್ನು ನಿಗದಿಪಡಿಸುವ ವ್ಯವಸ್ಥೆ ಮತ್ತು ಪತ್ರವ್ಯವಹಾರವನ್ನು ನಿರ್ವಹಿಸುವುದು ಈ ಗುಂಪುಗಳಿಗೆ ನಿಯೋಜಿಸಲಾದ ಕಾರ್ಯಗಳಲ್ಲಿ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next