Advertisement

ಪಾರದರ್ಶಕ ಆಡಳಿತ ನೀಡಿರುವ ಮೋದಿ

12:40 PM Jul 04, 2018 | Team Udayavani |

ತಿ.ನರಸೀಪುರ: ಕೇಂದ್ರದಲ್ಲಿ ಸತತ ನಾಲ್ಕು ವರ್ಷ ಪಾರದರ್ಶಕ ಆಡಳಿತ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಷ್ಟೇ ಅಲ್ಲ, ವಿದೇಶಿ ಮಟ್ಟದಲ್ಲೂ ಮಾನ್ಯತೆ ಪಡೆದಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಹೇಳಿದರು.

Advertisement

ಪಟ್ಟಣದ ಭೈರಾಪುರ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೈಕ್‌ ರ್ಯಾಲಿ ವೇಳೆ ಮಾತನಾಡಿದ ಅವರು, ದೂರದೃಷ್ಟಿ ಚಿಂತನೆ ಹಾಗೂ ಬಲಿಷ್ಠ ಭಾರತ ನಿರ್ಮಾಣ ಪರಿಕಲ್ಪನೆಯಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದ್ದಾರೆ ಎಂದರು.

ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಜನಜಾಗೃತಿ ಮೂಡಿಸಲು ನಾಲ್ಕು ವರ್ಷ ಪೂರೈಸಿರುವ ಸಂದರ್ಭದಲ್ಲಿ ಬೈಕ್‌ ರ್ಯಾಲಿ ಹಮ್ಮಿಕೊಂಡಿದೇವೆ ಎಂದರು. ವರುಣಾ ಕ್ಷೇತ್ರಾಧ್ಯಕ್ಷ ಶಿವಯ್ಯ ಮಾತನಾಡಿ, ನರಸೀಪುರ ಪುರಸಭೆ ಪ್ರತಿಯೊಂದು ವಾರ್ಡಿನಲ್ಲೂ ಬಿಜೆಪಿ ಕೇಂದ್ರ ಸರ್ಕಾರದ ಸಾಧನೆಗಳ ಮಾಹಿತಿ ನೀಡಿ, ಪುರಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಬೈಕ್‌ ರ್ಯಾಲಿ ಹೊಸ ತಿರುಮಕೂಡಲು ವೃತ್ತದ್ಲಲಿರುವ ಸೇತುವೆ ಮಠಕ್ಕೂ ತೆರಳಿ ಸಹಜಾನಂದ ಶ್ರೀಗಳಿಗೆ ಕೇಂದ್ರ ಸರ್ಕಾರದ ಸಾಧನೆಗಳ ಮಾಹಿತಿಯುಳ್ಳ ಕಿರು ಹೊತ್ತಿಗೆ ವಿತರಿಸಿತು. ಜಿಪಂ ಸದಸ್ಯ ಸದಾನಂದ, ನಿವೃತ್ತ ನೌಕರರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಶಂಕರಪ್ಪ, ವರುಣಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಿಕ್ಕಮಾದಪ್ಪ, ಕುಪ್ಪೇಗಾಲ ಶಿವಬಸಪ್ಪ, ಉಪಾಧಕ್ಷೆ ಎಸ್‌.ಲಕ್ಷ್ಮೀ, ಟೌನ್‌ ಅಧಕ್ಷ ಎಲ್‌.ಮಂಜುನಾಥ್‌, ಮುಖಂಡರಾದ ಯೋಗೇಶ್‌, ದೀಪು, ಮಹೇಶ್‌, ದಿಲೀಪ್‌ಕುಮಾರ್‌ ಶಶಿ ಇನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next