Advertisement

ಪ್ರಧಾನಿ ಮೋದಿ ಹೆಸರಲ್ಲಿ ಸರಪಾಡಿ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ !

10:04 AM Dec 27, 2019 | Hari Prasad |

ಬಂಟ್ವಾಳ: ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಎಲ್ಲಡೆ ಗ್ರಹಣ ದೋಷದ ಪರಿಹಾರಾರ್ಥವಾಗಿ ಗುರುವಾರ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಬೇರೆ ಬೇರೆ ರೀತಿಯ ಪೂಜಾ ವಿಧಿ ವಿಧಾನಗಳು ನಡೆದಿದ್ದು, ಸರಪಾಡಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅಭಿಮಾನಿ ಭಕ್ತರು ಹೋಮ ಮಾಡಿಸಿದ್ದಾರೆ.

Advertisement

ತಾಲೂಕಿನ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲೂ ಗ್ರಹಣದ ಹಿನ್ನೆಲೆಯಲ್ಲಿ ಗ್ರಹಣ ಶಾಂತಿ ಹೋಮ ಆಯೋಜಿಸಲಾಗಿತ್ತು. ಈ ವೇಳೆ ಮೋದಿ ಅಭಿಮಾನಿ ಭಕ್ತರು ಪ್ರಧಾನಿಯ ಹೆಸರಿನಲ್ಲಿ ಹೋಮದ ನಿಗದಿತ ಮೊತ್ತವನ್ನು ಪಾವತಿಸಿ ರಶೀದಿ ಮಾಡಿಕೊಂಡು ಪೂಜೆ ಮಾಡಿಸಿದ್ದಾರೆ. ಮೋದಿಯವರ ಪೂರ್ಣ ಹೆಸರಿನೊಂದಿಗೆ ರಾಶಿ, ನಕ್ಷತ್ರವನ್ನೂ ತಿಳಿದುಕೊಂಡು ಈ ರೀತಿ ಹೋಮದ ಸೇವೆ ನೀಡಿದ್ದಾರೆ.


ಗ್ರಹಣದ ಸಮಯದಲ್ಲಿ ದೇಶದ ಯಾವುದೋ ಒಂದು ಕಡೆ ಪ್ರಧಾನಿಯವರ ಹೆಸರಿನಲ್ಲಿ ಭಕ್ತರು ಪೂಜೆ ಮಾಡಿಸಿರುವುದನ್ನು ಫೇಸ್ಬುಕ್‌ ಮೂಲಕ ತಿಳಿದುಕೊಂಡು ತಾವೂ ಹೋಮ ಮಾಡಿಸಿದ್ದಾರೆ. ಪ್ರಧಾನಿಯವರಿಗೆ ದೇಶವನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸುವ ಶಕ್ತಿ ಸಿಗಲಿ ಎಂದು ಹೋಮ ಮಾಡಿಸಿದ್ದೇವೆ ಎಂದು ಅಭಿಮಾನಿ ಭಕ್ತರೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next