Advertisement

ಮೋದಿ, ಅಪ್ಪಾಜಿ ಬಳಿಕ ಸಿದ್ದರಾಮಯ್ಯ ಕ್ಯಾಂಟಿನ್‌!

11:25 AM Jan 02, 2018 | Team Udayavani |

ಲೋಕಾಪುರ: ಇಂದಿನ ದುಬಾರಿ ದಿನಮಾನಗಳಲ್ಲಿ ಕೇವಲ 5 ರೂಪಾಯಿಗಳಲ್ಲಿ ಗುಣಮಟ್ಟದ ಉಪಹಾರ ನೀಡುತ್ತಿರುವುದು ಸತೀಶ ಬಂಡಿವಡ್ಡರ ಅವರ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಎಸ್‌.ಆರ್‌. ಪಾಟೀಲ ಹೇಳಿದರು.

Advertisement

ಸ್ಥಳೀಯ ಪ್ರವಾಸಿ ಮಂದಿರ ಹತ್ತಿರ ಸತೀಶ ಬಂಡಿವಡ್ಡರ ಫೌಂಡೇಶನ್‌ ವತಿಯಿಂದ ಜನಸ್ನೇಹಿ ಸಿದ್ದರಾಮಯ್ಯ ಕ್ಯಾಂಟೀನ್‌ಗೆ ಚಾಲನೆ ನೀಡಿ ಮಾತನಾಡಿದರು. ಹಸಿದವನಿಗೆ ಅನ್ನ ನೀಡುವುದು ಶ್ರೇಷ್ಠ ಕೆಲಸ, ತಮ್ಮ ಸ್ವಂತ ದುಡಿಮೆ ಹಣದಲ್ಲಿ ಸತೀಶ ಬಂಡಿವಡ್ಡರ ನಿರ್ಮಿಸಿರುವ ಜನಸ್ನೇಹಿ ಸಿದ್ದರಾಮಯ್ಯ ಕ್ಯಾಂಟೀನ್‌ ಬಡ ಜನರು, ಕೂಲಿ, ಕಾರ್ಮಿಕರು ವಿದ್ಯಾರ್ಥಿಗಳಿಗೆ ಹಾಗೂ ರೈತಾಪಿ ವರ್ಗದ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಫೌಂಡೇಶನ್‌ ಸಂಸ್ಥಾಪಕ ಸತೀಶ ಬಂಡಿವಡ್ಡರ, ಕೆಪಿಸಿಸಿ ಕಾರ್ಯದರ್ಶಿ ದಯಾನಂದ ಪಾಟೀಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next