Advertisement

ಮಾದರಿ ಮೈಸೂರನ್ನು ರೂಪಿಸಿದವರು ಸರ್‌.ಮಿರ್ಜಾ ಇಸ್ಮಾಯಿಲ್‌: ಡಾ. ಮಹೇಶ ಜೋಶಿ

10:12 PM Oct 25, 2022 | Team Udayavani |

ಬೆಂಗಳೂರು: ಅತ್ಯಂತ ಸೌಜನ್ಯ, ವಿನಯತೆ, ಕಾರ್ಯತತ್ಪರತೆಯ ಅದರ್ಶ ಗುಣಗಳನ್ನು ಹೊಂದಿದ್ದು, ಜನರ ಮನಸ್ಸನ್ನು ಗೆದ್ದವರು ಸರ್‌.ಮಿರ್ಜಾ ಇಸ್ಮಾಯಿಲ್‌. ಮೈಸೂರು ನಗರ ಅತ್ಯಂತ ಸುಂದರ ನಗರವಾಗುವುದಕ್ಕೆ ಮಿರ್ಜಾ ಇಸ್ಮಾಯಿಲ್‌ ಅವರೇ ಕಾರಣ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

Advertisement

ನಗರದ ಚಾಮರಾಜಪೇಟೆ ಕಸಾಪ ಶ್ರೀಕೃಷ್ಣರಾಜ ಪರಿಷ್ಮಂದಿರದಲ್ಲಿ ಮಂಗಳವಾರ ನಡೆದ ದಿವಾನ್‌ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ 137ನೇ ಜನ್ಮದಿನದ ಸಮಾರಂಭದಲ್ಲಿ ಮಾತನಾಡಿದರು.

ಇಸ್ಮಾಯಿಲ್‌ ಅವರು ಪರ್ಷಿಯಾ ಮೂಲದವರಾದರೂ ಕನ್ನಡದ ಮೇಲೆ ಅಪಾರ ಗೌರವ ಹೊಂದಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಥಳದ ಅವಶ್ಯಕತೆ ಇದೆ ಎಂದಾಗ ಉಚಿತ ಸ್ಥಳವನ್ನು ನೀಡಿ, ಕನ್ನಡ ತಾಯಿಯ ದೇಗುಲ ಇಲ್ಲಿ ಸಿದ್ಧವಾಗಲಿ ಎಂದು ಹೇಳಿದ ಮಾತುಗಳನ್ನು ನೆನಪಿಸಿಕೊಂಡರು.

ಇದೇ ವೇಳೆ ಜೆಎಸ್‌ಎಸ್‌ ಮಹಾವಿದ್ಯಾಲಯ ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಶೇಖರ ಉಷಾಲ ಅವರು ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಿರಿಯ ಸಾಹಿತಿ ಅಬ್ದುಲ್‌ ಬಷೀರ್‌, ಕಸಾಪ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಕೆ. ಮಹಾಲಿಂಗಯ್ಯ, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್‌ಪಾಂಡು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next