Advertisement

Mangalore: ಮೊಬೈಲ್‌ ಕಳ್ಳತನ: 3ವರ್ಷ ಸಜೆ, 5 ಸಾವಿರ ರೂ.ದಂಡ

09:44 PM Feb 29, 2024 | Team Udayavani |

ಮಂಗಳೂರು: ನಗರದ ಉರ್ವ ಬಳಿಯ ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಯರ ಮೊಬೈಲ್‌ ಕಳವು ಮಾಡಿದವನಿಗೆ ನ್ಯಾಯಾಲಯ 3ವರ್ಷ ಸಜೆ, 5 ಸಾವಿರ ರೂ. ದಂಡ ವಿಧಿಸಿದೆ.

Advertisement

ಮಹೇಶ್‌ ಪೈ ಶಿಕ್ಷೆಗೊಳಗಾದಾತ. 2023ರ ಜೂ.18ರಂದು ವಿದ್ಯಾರ್ಥಿ ನಿಲಯದ ಒಳ ಪ್ರವೇಶಿಸಿ ವಿದ್ಯಾರ್ಥಿನಿಯರ 3 ಮೊಬೈಲ್‌ ಕಳವು ಮಾಡಿದ್ದ. ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಶಿಕ್ಷೆ ವಿಧಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next